May 6, 2010


"ಕಾಣದ ನೋವು"

ಬರೆಸಿಕೊಳ್ಳುವ ಹಾಳೆ ಕೇಳಿತು,
ಬರೆವ ಕವಿಗೊಮ್ಮೆ !
ಮರದುಸಿರ ನಿಲ್ಲಿಸಿ
ಕೊರೆದು ಅರೆದು ತರೆವಾರಿ ಕತ್ತರಿಸಿ ನಗುವಾಗ,
ಮರದಳಲು ನಿನಗೆ ಕೇಳಲಿಲ್ಲವೇ ?
ಎಲ್ಲರ ಮನದಾಳಕಿಳಿವ ಕವಿಯೇ .
ನಿನ್ನ ಪ್ರತಿ ಅಕ್ಷರವೂ ನನ್ನೆದೆ ಇರಿವಾಗ,
ಮಾನವೀಯ ಮೌಲ್ಯ ಎತ್ತಿ ಹಿಡಿವ ಕವಿತೆ
ಬರೆದೆ ಎನ್ನುವ ಹೆಮ್ಮೆಯಲಿ ನೀನಿರುವಾಗ,
ನನ್ನೆದೆಯ ರಕ್ತದ ಕಲೆ ನಿನಗೆ ಕಾಣಲಿಲ್ಲವೇ ?

ಮೃದು ಕವಿ ನಕ್ಕು ನುಡಿದ:
ಎಲ್ಲವೂ ಅನುಭವಿಸಬೇಕಾದ ಅನಿವಾರ್ಯತೆ.
ಹಾಳೆಯಕಣ್ಣಲ್ಲಿ ಕಣ್ಣಿಟ್ಟು ನೋಡಿದ ಕವಿಗೆ
ಹೊಳೆಯಿತು ಹೊಸ ಕವಿತೆ.

=====
=====