Dec 21, 2011



"ತಲ್ಲಣ"


¥Á¼ÀÄ ©¢ÝvÉÆAzÀÄ Nt ºÀ½îAiÉƼÀUÉ

ºÀ¼ÉAiÀÄ ªÀÄtÂÚ£À ªÀÄ£ÉUÀ¼ÀÄ DAiÀÄvÀ¦à ªÀÄuÁÚVªÉ

E°, ºÉUÀÎt, ºÁªÀÅUÀ¼ÀÄ ªÀÄ£ÀĵÀågÀAvÉ NqÁrPÉÆArªÉ

CPÀÌ-¥ÀPÀÌzÀ PÉ®ªÀÅ UÀnÖªÀÄÄmÁÖzÀ ªÀÄ£ÉUÀ½UÀÆ ®UÉάÄnÖªÉ

C¤jÃQëvÀ £ÉʸÀVðPÀ zÁ½UÉ ¥ÀƪÀð vÀAiÀiÁj¬Ä®èzÉ,

MmÁÖgÉ ¥Á¼ÀÄ ©¢ÝvÉÆAzÀÄ Nt ºÀ½îAiÉƼÀUÉ


vÁ®ÆPï D¦üûù¤AzÀ §AzÀ ¥ÀjºÁgÀ ZÀlUÀ¼À ¥Á¯Á¬ÄvÀÄ

D¸ÉAiÀÄ ¨É£ÀßwÛ vÀAzÀ PÀrªÉÄ PÁé°n gÉñÉä ¹ÃgÉ ºÀjzÀĺÉÆìÄvÀÄ

©¹®Ä, ªÀļÉ, UÁ½, ºÀUÀ®Ä-gÁwæAiÀÄ° UÀzÉÝV½AiÀÄzÉ ºÁ¹UÉAiÀÄ°

¨ÉªÀgÀĪÀ dqÀUÀnÖzÀ zÉúÀ ±ÁmïðPÀmï zÁj ºÀÄqÀÄPÀ¯ÁgÀA©ü¹vÀÄ

§jà HºÉUÀ¼Éà vÀÄA©zÀ ªÉÄmÉÆæ ¹n PÀ£À¸ÀÄUÀ¼À ¸É¼ÉvÀPÉÌ

§AzÀªÀ£ÀÄ PÁAQæÃmï PÁr£À°è PÀPÁÌ©QÌ

«®PÀëtªÁzÀ ªÀiÁqÀæ£ï ¯ÉÊ¥sóï ¸ÉÖöÊ°UÉ

FUÀ vÁ£É ªÉƯɺÁ®Ä ©lÖ ªÀÄPÀ̼ÀÄ PÀAUÁ®Ä

¤UÀðwPÀ C¯ÉªÀiÁjAiÀÄAvÉ ¥sóÀÄmï¥Áw£À mÁ¥Àð°£ï UÀÄr¸À®°è

ªÀÄ®VzÀgÉ ºÉÆgÀUÉ PÁtĪÀ ªÀÄÄAUÁ®Ä


¥sóÁåµÀ£ï zɪÀé CªÀÄjPÉÆAqÀ ºÀÄqÀÄV vÉÆj¸ÀĪÀ ZÀrØ-¨ÁæUÀ¼À

£ÉÆÃrzÁUÀ ºÀ¸ÀÛªÉÄÊxÀÄ£ÀPÀÆÌ ¥Éæöʪɹ¬Ä®èzÀ VfVf

¯ÉÆà ªÉøïÖ ¥ÁåAlÄUÀ½UÉ ¸ÉÆAl PÀ¼ÉzÀÄPÉÆÃAqÀ UÀAqÀÄ

vÉÆqɬĮèzÀ ºÀÄqÀÄUÀ¤UÉ ¸ÉgÀUÀÄ ºÁ¹zÀÄÝ ¥ÁvÉæ vÉƼÉAiÀÄ®Ä ºÉÆÃzÀ ªÀÄ£ÉAiÀÄ°è

UÀÄr¸À® ªÀÄÄAzÉ PÉʺÉÆvÀÄÛ PÀÆvÀ §wÛ ºÉÆÃzÀ ªÀÄÄzÀÄQAiÀÄ C¸ÀàµÀÖ

PÀtÄÚUÀ¼À°è ¹A§¼À MgɹPÉƼÀîzÉ DqÀÄwÛzÀÝ ªÀÄPÀ̼À §zÀÄPÀÄ ZɯÁ覰è


G¥ÀAiÉÆÃV¹ ©lÖ ²y® ¸ÀƼÉAiÀÄAvÀ ªÉÄʬĮèzÀ ªÀÄ£ÉUÀ¼À

C¹Ü¥ÀAdgÀzÀ £ÀqÀĪÉ, ¸ÀA§æªÀÄzÀ ¥À¼ÉAiÀÄĽPÉAiÀÄAvÀ PÀA§UÀ¼ÀÄ E£ÀÆß fêÀAvÀ

ºÀ½îAiÀiÁV G½AiÀÄzÀ ºÀ½îAiÀÄ ¸ÀA¢UÉÆA¢UÀ¼À°è ¸Àä±Á£À ªÀiË£À

PÀuÉÚzÀÄjUÉ PÀAqÀ ªÉʨsÀªÀ PÀ¼ÉzÀĺÉÆÃzÀ ªÉÄÃ¯É G½zÀzÀÄÝ ªÀiÁvÁqÀzÀ ªÀiË£À


(After reading this poem my brother Dinakar Moger sent above photo, Thanks Anna )

=====

=====

Nov 5, 2011

"ಮತ್ತೆ ಸಿಗುವೆಯಾ ಒಮ್ಮೆ, please"

ಸ್ಕೂಲ್ ನಲ್ಲಿ ಮುಂದಿನ ವರ್ಷಕ್ಕೆ ಅಡ್ಮಿಷನ್ ಆದ್ಮೇಲೆ ಅಪ್ಪ-ಅಮ್ಮನ ಸತಾಯ್ಸಿ, ಜಗಳ ಮಾಡಿ ಹೊಸ note ಬುಕ್, ಟೆಕ್ಸ್ಟ್ ಬುಕ್, ಪೆನ್ನು, ಪೆನ್ಸಿಲ್, ಕಂಪಾಸ್ ಬಾಕ್ಸ್, ಹೊಸ ಸ್ಕೂಲ್ ಬ್ಯಾಗು, ಟಿಫನ್ ಬಾಕ್ಸ್ . . . .ಒಂದ ಎರಡ ಖರೀದಿ ಮಾಡೋದು! . . .ಮತ್ತೆ ಅದೇನ್ ತಮಾಷೆ ಮಾತ!
'ಇನ್ನು ಟೈಮಿದೆ, ಆಮೇಲೆ ತೊಗೊಂದ್ರಾಗುತ್ತೆ ಬಿಡೋ' ಅನ್ನೋ ಮಾತು ಕಿವಿಗೆ ಬೀಳ್ತಾನೆಯಿರ್ಲಿಲ್ಲ. ಒಟ್ನಲ್ಲಿ ಬೇಗ ತೊಗೊಂಡು ಫ್ರೆಂಡ್ಸ್ ಗೆ ಹೇಳ್ಬೇಕು. ಅವನು ಯಾವ ಸ್ಟಿಕ್ಕರ್ ಅಂಟಿಸಿದಾನೆ, ಇವನತ್ರ ಯಾವ್ದಿದೆ. ನನ್ನತ್ರ ಇರೋದು ಅವರಿಗಿಂತ ಚೆನ್ನಾಗಿದೆಯಾ ? ಇಲ್ವಾ, ಹಾಗಾದ್ರೆ ಮತ್ತೆ ಅಪ್ಪ-ಅಮ್ಮನಿಗೆ ಜೋತು ಬೀಳು.
ಅಪ್ಪ-ಅಮ್ಮನ ಜೊತೆ ದಾರೀಲಿ ಹೋಗ್ತಾಯಿದ್ರೆ, ಅಂಗಡಿಲಿ ಏನೇನ್ ಕಾಣುತ್ತೆ ಎಲ್ಲಾದುಕ್ಕು ಕೈ ತೋರಿಸಿ - 'ಅದು ಅದು ಅಮ್ಮ ಅದು' ಅನ್ನೋದು. 'ಇನ್ನೊಂದ್ಸಲ ಬಂದಾಗ ತೊಗೊಳೋಣ' ಅಂದ್ರೆ ಮುಗೀತು ದಾರಿಯುದ್ದಕ್ಕೂ 'ಕಣ್ಣೀರ ಧಾರೆ' ಮತ್ತು ಎರಡು ಕೈಯಲ್ಲಿ ಒಂದೊಂದು ಚಾಕೊಲೆಟ್ ! ಒಂದು ಅಮ್ಮನ ಸೀರೆಗೆ ಅಥವಾ ಅಪ್ಪನ ಶರ್ಟಿಗೆ !! ಅರ್ಧ ನೆಲಕ್ಕೆ !! ಅರ್ಧ ನಮ್ಮ ಬಾಯಿಗೆ !! ಹೌದಲ್ವಾ ?

'ಸ್ಕೂಲಿಂದ ಬರ್ತಿದಾನೋ, ಗದ್ದೆ ಕೆಸರಲ್ಲಿ ಉರುಳಾಡಿ ಬರ್ತಿದಾನೋ, ನನ್ನ ಮಗ' ಅಂತ ಅಮ್ಮ confuse ಆಗ್ಬೇಕು ಅಷ್ಟು ಕ್ಲೀನಾದ ಸ್ಕೂಲ್ ಯುನಿಫಾರ್ಮ್. ಬೆಳಗ್ಗೆ ಕ್ಲೀನ್ & ಟೈಡಿ, ಸಂಜೆ ಡರ್ಟಿ & ಡರ್ಟಿ! ಮನೆಗೆ ಬಂದ ತಕ್ಷಣ ತಿನ್ಲಿಕ್ಕೆ ಏನಾದ್ರೂ ಸ್ವೀಟ್ ಇರಲೇಬೇಕು, ಸ್ಕೂಲ್ ಗೆ ಹೋಗಿ ಬರೋದೆ ಒಂದು ದೊಡ್ಡ ಕೆಲಸ ಆಲ್ವಾ ?, ಅದಕ್ಕೆ ಯಾವಾಗಲು ಅಡುಗೆ ಮನೇಲಿರೋ ಡಬ್ಬೀಲಿ ಏನಾದ್ರೂ ಸ್ವೀಟ್ ಇದ್ದೇ ಇರ್ತಿತ್ತು. ಅಟ್ ಲೀಸ್ಟ್, ಕೊಬ್ರಿ-ಬೆಲ್ಲ ಮಿಕ್ಸ್ ಮಾಡಿ; ಮಾಡಿದ ಉಂಡೆಗಳು ಇರ್ತಿದ್ವು. This tradition still exist.

ದಿನ ಮಲೋಗೋ ಟೈಮಿಗಿಂತ ಬೇಗ ಮಲಗಿದ್ರೆ, ನಾನು ಮಲಗಿರುವಾಗ್ಲೆ ಅಮ್ಮ ಬಂದು ಬಟ್ಟೆ ಬಿಚ್ಚಿ ಏನಾದ್ರೂ ಜಗಳ ಮಾಡಿ ಪೆಟ್ಟು ಬಿದ್ದಿದಿಯಾ ? ಪರಚಿಕೊಂಡು ಗಾಯ ಆಗಿದಿಯಾ? ಅಂತ ಚೆಕ್ ಮಾಡೋಳು. ಹಾಗೇನಾದ್ರೂ ಆಗಿದ್ರೆ ಅರಿಶಿನ ಲೇಪನ, ಅದು ಅಮ್ಮನ ಆ ಕ್ಷಣದ ಟ್ರೀಟ್ ಮೆಂಟ್. ಊಟ ಮಾಡದೆ ಮಲಗಿದ್ರೆ, ಅನ್ನ, ಹಾಲು & ಮೊಸರು ಹದವಾಗಿ ಕಲಸಿ ಮೆದು ಮಾಡಿ, ನನ್ನನ್ನ ತೊಡೆ ಮೇಲೆ ಮಲಗಿಸಿಕೊಂಡು ಬಾಯಿಗಿಡುತ್ತಿದ್ದಳು ಅಮ್ಮ. ನಾನಂತೂ ನಿದ್ದೆಗಣ್ಣಲ್ಲೇ ಗುಳುಂ ಗುಳುಂ.

ದಿನಾ ಸ್ಕೂಲಿಗೆ ಹೋಗೋವಾಗ ಅಪ್ಪ ಎರಡು ಅಥವಾ ಐದು ರುಪಾಯಿ ಕೊಡ್ತಿದ್ರು, ಒಮ್ಮೊಮ್ಮೆ ಹತ್ತು ರುಪಾಯಿ - ಅವತ್ತಂತೂ ಹಬ್ಬ. ಸ್ಕೂಲ್ ಪಕ್ಕ ಐಸ್ ಕ್ರೀಮ್ ಪಾರ್ಲರ್ ಇತ್ತು, ಮತ್ತಿನ್ನೇನು ಬೇಕು?
ಅಪ್ಪ, ಯಾವ್ದೋ ಕೆಲಸದ ಸಲುವಾಗಿ ಸ್ಕೂಲ್ ಕಡೆ ಬಂದಾಗ ಮೀಟ್ ಮಾಡೋಕೆ ಬರೋರು. ಸ್ಕೂಲ್ ನ 'ಆಯಾ' (Care taker) ಆಂಟಿ ಕ್ಲಾಸ್ ಗೆ ಬಂದು 'ನಾಗರಾಜ್ ತಂದೆ ಬಂದಿದಾರೆ' ಅಂತ ಹೇಳ್ತಾಯಿದ್ಲು, ನಾನಂತೂ ಫುಲ್ ಖುಷ್; ಅಪ್ಪಿ-ತಪ್ಪಿ ಅದು ಕನ್ನಡ ಪಿರಿಯಡ್ ಇದ್ರಂತೂ ಇನ್ನೂ ಖುಷಿ. ಕನ್ನಡ ಮೇಡಂ, ಭಯಂಕರ - ನಾವು ಏನೇ ತಪ್ಪು ಮಾಡಿದ್ರು ಅವರೇ ಫಸ್ಟ್ & ಫಾಸ್ಟ್ ಪನಿಷ್ಮೆಂಟ್ ಕೊಡೋರು,ಯಾಕಂದ್ರೆ ಅವರೇ ಕ್ಲಾಸ್ ಇನ್ಚಾರ್ಜ್! ಆಮೇಲೆ ಪ್ರಕರಣದ ಗಂಭೀರತೆ ಆಧರಿಸಿ ಗ್ರೌಂಡ್ ಫ್ಲೋರ್ ನಲ್ಲಿರೋ ಪ್ರಿನ್ಸಿಪಲ್ ಕ್ಯಾಬಿನ್ನಿನ ಮುಂದೆ ಸಾಲಾಗಿ ನಿಲ್ಲಿಸೋರು. 'ಮುಂದೈತೆ ಮಾರಿ ಹಬ್ಬ' ಅನ್ನೋ ರೀತಿಲಿ ನಾವು ಒಬ್ಬರ ಮುಖ ಒಬ್ಬರು ನೋಡ್ತಾಯಿದ್ವಿ. ಧೈತ್ಯ ದೇಹಿ ಕ್ರಿಶ್ಚಿಯನ್ ಮೇಡಂ, school ಪ್ರಿನ್ಸಿ. ನಮ್ಮ ಕೈ ತಿರುಗಿಸಿ, ಕಟ್ಟಿಗೆ ರೂಲರ್ ನಿಂದ ಬಾರ್ಸ್ತಾಯಿದ್ರೆ ನಮಗೆ ನಕ್ಷತ್ರ ಕಾಣುತ್ತಿದ್ದವು.

ಒಮ್ಮೊಮ್ಮೆ ಅಪ್ಪ ಕೆಳಗಡೆ ನನಗೋಸ್ಕರ ಕಾಯ್ತಾ ನಿಂತು ಯಾರದೋ ಜೊತೆ ಮಾತಾಡುವಾಗಾ, ನಾನು ಸ್ಕೂಲಿನ ಎರಡನೇ ಫ್ಲೋರ್ ನಿಂದ 'ಅಪ್ಪಾಜಿ . . . .ಅಪ್ಪಾಜಿ' ಅಂತ ಅವರು ನನ್ನ ನೋಡೋವರ್ಗೂ ಕೂಗ್ತಾಯಿದ್ದೆ, ನಂತರ, ಒಂದೇ ಉಸಿರಲ್ಲಿ ಗ್ರೌಂಡ್ ಫ್ಲೋರ್ ಗೆ ಬರೋದು. ಬೇರೆ ಯಾರಾದ್ರು ನೋಡಿದ್ರೆ ಫಸ್ಟ್ ಟೈಮ್ ಅಪ್ಪನ್ನ ನೋಡ್ತಿದೀನಿ ಅನ್ಕೋಬೇಕು.
ಮನೇಲಿ ಅಪ್ಪನ ಷರ್ಟ್ ನಿಂದ ಎರಡು ರುಪಾಯಿ ಎಗರಿಸಿ ಮೆಲ್ಲಗೆ ಬಾಗಿಲು ವರೆಗೆ ಹೋಗಿ 'ಅಪ್ಪಾಜಿ, ಎರಡು ರುಪಾಯಿ ತೊಗೊಂದಿದಿನಿ' ಅಂದು ಓಡು ಓಡು ಅಂಗಡಿ ಮುಟ್ಟೋ ವರೆಗೂ ಓಡು.

ನಾನು ತುಂಬಾ ನಿದ್ದೆ ಮಾಡ್ತಾಯಿದ್ದೆ ಅದಕ್ಕೆ ಶನಿವಾರ ಅಂದ್ರೆ ನನಗೆ ಆಗ್ತಿರ್ಲಿಲ್ಲ. ಬೆಳಗ್ಗೆ ಬೇಗ ಏಳಬೇಕು, ರೆಡಿಯಾಗಿ ಬಸ್ಸಿನಲ್ಲಿ ಹತ್ತು ಕಿಲೋಮೀಟರು ದೂರ ಹೋಗ್ಬೇಕು ಸ್ಕೂಲ್ ಗೆ. ನಾನು ಶನಿವಾರ ಎದ್ದಾಗಿನಿಂದ ರೇಡಿಯಾವರ್ಗೂ ಅಳ್ತಾಯಿದ್ದೆ. ಸ್ನಾನ ಮಾಡೋವಾಗ ಅಳ್ತಾಯಿದ್ರೆ 'ಯಾಕೋ' ಅಂದ್ರೆ 'ಸುಮ್ನೆ' ಅಂತಿದ್ದೆ !! ಹಾಗೆ ನಾನು ಐದನೇ ಕ್ಲಾಸಿನ ವರೆಗೆ ಅತ್ತಿದಿನಿ! ದಿನ ಅಮ್ಮ ತಿಂಡಿ ರೆಡಿ ಮಾಡಿದ್ರೆ, ಅಪ್ಪ ಡ್ರೆಸ್ ತೊಡಿಸಿ ತಲೆಗೆ ಎಣ್ಣೆ ಹಚ್ಚಿ ನೀಟಾಗಿ ಬಾಚ್ತಾಯಿದ್ರು.

ಒಮ್ಮೆ ರಜೆಯಲ್ಲಿ ದೊಡ್ಡಮ್ಮ ಹೇಳಿದ್ರು - 'ಅಡುಗೆ ಮಾಡಿದವರು ತುಂಬಾ ಕಷ್ಟಪಟ್ಟು, ಪ್ರೀತಿಯಿಂದ ಅಡುಗೆ ಮಾಡಿರ್ತಾರೆ, ಅವರಿಗೆ ಖುಷಿಯಾಗೋ ತರಾ ಊಟ ಮಾಡ್ಬೇಕು', ಹಸಿವು ಮಾಡಿಕೊಂಡು ಇರಬೇಡ ಅಂತ ಅಮ್ಮ ಹೇಳಿದ್ರೆ, ಊಟದಲ್ಲಿ ಅದೂ ಬೇಡ ಇದು ಬೇಡ ಅನ್ಬಾರ್ದು, ಎಲ್ಲಿಗಾದ್ರೂ ಹೊರಟರೆ ಸ್ವಲ್ಪ ಹೆಚ್ಚು ಹಣಯಿರ್ಬೇಕು. students ಹತ್ರ ಯಾವಾಗಲು ಪೆನ್ನು, ಪೇಪರ್, ವಾಚ್ & ಒಂದು ಚಿಕ್ಕ ಬಾಚನಿಕೆಯಿರ್ಬೇಕು ಅಂತ ಹೇಳ್ತಾರೆ ಅಪ್ಪ.

ಮೊಬೈಲ್ ನಲ್ಲಿ ಟೈಮ್ ನೋಡಬಹುದು, ಚಿಕ್ಕ ಬಾಚಣಿಕೆಗಳು ನನ್ನ ಕೂದಲನ್ನ ಮಣಿಸೋಕೆ ಕಷ್ಟ ಪಡ್ತವೆ, ಅದಕ್ಕೆ ನನ್ನತ್ರ ಅವೆರಡಿಲ್ಲ. ಪೆನ್ನು-ಪೇಪರ್ ನನ್ನತ್ರ ಮೊದಲಿಂದಲೂ ಉಳಿದಿಕೊಂಡಿವೆ, ಯಾವಾಗಲು ಇರ್ತವೆ. ಹಾಗಾಗಿ ನನ್ನ ಈ ಬ್ಲಾಗ್ ಹೆಸರು 'ಪೆನ್ನುಪೇಪರ್'. ಅಪ್ಪ-ಅಮ್ಮ ಜೋತೆಯಿಲ್ದೆ ಅಜ್ಜಿ ಮನೆಗೆ ಹೊರಟರೆ, ಇರುವ ಹಣವನ್ನ ಒಂದೇ ಕಡೆ ಇಟ್ಕೋಳ್ಳೋಕೆ ಅಪ್ಪ ಬಿಡ್ತಾಯಿರ್ಲಿಲ್ಲ. ಸ್ವಲ್ಪ ಶರ್ಟಿನ ಜೇಬಲ್ಲಿ, ಸ್ವಲ್ಪ ಚಡ್ಡಿಯ ಜೇಬಲ್ಲಿ ಇಟ್ಕೊಬೇಕು. ಒಂದ್ಕಡೆ ಇರೋ ಹಣ ಕಳ್ದೊದ್ರೆ ಇನ್ನೊಂದು ಕಡೆ ಇರುತ್ತಲ್ಲ, ಹೆಂಗೆ ?

ಅಪ್ಪ-ಅಮ್ಮನ ಪ್ರೇರಣೆಯ ಮೇರೆಗೆ ಕ್ಲಾಸ್ ಬಂಕ್ ಮಾಡಿ ಸಿನಿಮಾ, ಒಮ್ಮೊಮ್ಮೆ ಅಪ್ಪ-ಅಮ್ಮ ಸಿನಿಮಾ ಥಿಯೇಟರ್ ಹತ್ರ ಕಾಯ್ತಾಯಿರ್ತಿದ್ರು ನಾನು ಕ್ಲಾಸ್ ಬಂಕ್ ಮಾಡಿ ಹೋಗ್ತಾಯಿದ್ದೆ. (ಇದು ತುಂಬಾ ಕಡಿಮೆ ಫ್ಯಾಮಿಲಿಯಲ್ಲಿ ನಡೆಯುತ್ತೆ). What a family ? ನನ್ನ ಸ್ಕೂಲಿನ attendance book ನೋಡಿದ್ರೆ ನಾನು absent ಆಗಿರೋದು almost all ಶುಕ್ರವಾರ.

ತಯಾರಿ ಮಾಡಿಕೊಳ್ಳದೆ essay competition ನಲ್ಲಿ ಭಾಗವಹಿಸಿ, ಏನು ಬರೆಯದೆ ಖಾಲಿ ಪೇಪರ್ ಕೊಟ್ಟು ಬಂದು ಅಮ್ಮನ ಜೊತೆ ಜಗಳ ಮಾಡಿದೆ. ಒಂದು ವಾರ ಬಳಸಿ ನನಗೆ ಇದು ಬೇಡ, ಬೇರೆ 'ಷೂ' ಬೇಕು ಅಂತ ಹಠ ಹಿಡಿದೆ. ಕರಾಟೆ ಕ್ಲಾಸ್ ಮುಗಿಸಿ ಬರುವಾಗ ಸುಸ್ತಾಗಿ ನಿದ್ದೆ ಮಾಡ್ತಾ ಮಾಡ್ತಾ ಊರಿನ ಸ್ಟಾಪ್ ನಲ್ಲಿ ಇಳಿಯದೆ ಬೇರೆ ಯಾವುದೋ ಊರಲ್ಲಿ ಎಚ್ಚರವಾಗಿ ಅಲ್ಲಿಯ ಅಪ್ಪನ ಫ್ರೆಂಡ್ ಮನೇಲಿ ರಾತ್ರಿ ಉಳಿದುಕೊಂಡಿದ್ದೆ , ಅವರ ಮನೆಯಿಂದ ಫೋನು ಮಾಡಿದಾಗಲೇ ನನ್ನ ಹುಡುಕಾಟ ನಿಂತಿದ್ದು. ಅಪ್ಪನ ಫ್ರೆಂಡ್ ಮನೇಲಿ ಅವತ್ತು non-veg ಊಟ, ನಾನು ಅವತ್ತಿಗೆ ಪಕ್ಕ ವೆಜ್ .ಅವರು ನನಗೋಸ್ಕರ ಅನ್ನ-ಮೊಸರು ಕಲೆಸಿ ಕೊಟ್ಟಿದ್ರು.

ನಾನು veg & non-veg ಆಗಿದ್ದು ಇಂಜಿನಿಯರಿಂಗ್ ಮೂರನೇ ವರ್ಷದ ಶುರುವಿನಲ್ಲಿದ್ದಾಗ ನಲ್ಲಿದ್ದಾಗ, ಈಗ ವರ್ಷಕ್ಕೆ ಒಂದು - ಒಂದುವರೆ ಕೋಳಿ ಕೊಲೆಯಾಗುತ್ತೆ ನನ್ನಿಂದ.ಕಲ್ಚರಲ್ ಪ್ರೋಗ್ರಾಮ್ ನಲ್ಲಿ ಭಾಗವಹಿಸುವುದರಲ್ಲಿ ಉತ್ಸಾಹ. ಯಾಕೋ ಏನೋ ಟ್ಯುಶನ್ ಕ್ಲಾಸ್ ಅಂದ್ರೆ ಅಸಹ್ಯ. ಅಪ್ಪ-ಅಮ್ಮ ಹೋಗು ಅಂತ ಒತ್ತಾಯ ಮಾಡಲಿಲ್ಲವಾದರು ಕೆಲವೊಂದು ಕಡೆ ಅಡ್ಮಿಶನ್ ಮಾಡಿಸಿದೆ ಹೋಗಿದ್ದು ಅಷ್ಟರಲ್ಲೇ ಇದೇ, ಅಪ್ಪನ ದುಡ್ಡು ಮಗನ ಜಾತ್ರೆ!

ನಟರಾಜ್ ಪೆನ್ಸಿಲ್ಲು, ರೆನಾಲ್ದ್ಸ್ ಪೆನ್ನು, ವಿದ್ಯಾ ಲೇಖಕ್ ನೋಟ್ ಬುಕ್, ಫ್ರೀ ಯಾಗಿ ಕೊಡುತ್ತಿದ್ದ ಸ್ಟಿಕ್ಕರ್ಸ್, ಖರೀದಿಸಿದ ಸ್ಟಿಕ್ಕರ್ಸ್, no exam fear, no result fear . . . . but, every day home work ? - oh my god. it was more than fear.
ಚಿನ್ನಿ-ದಾಂಡು, ಗೋಲಿ, ಗಿಳ್ಳಪಟ್ಟ, ಕೇರಂ, ಚೆಸ್, ಬುಗುರಿ, ಗಾಳಿಪಟ, ಮಣ್ಣಿನಲ್ಲಿ ಮಾಡಿದ ಟ್ರ್ಯಾಕ್ಟರ್ ಗೆ ಬಳಸಿ ಬಿಸಾಡಿದ ಮೆಡಿಸಿನ್ ಬಾಟಲಿಯ ರಬ್ಬರ್ ಮುಚ್ಚಳಗಳೇ ಚಕ್ರ, ಹಳೆಯ, ಹಂಚದೆ ಉಳಿದ ಲಗ್ನ ಪತ್ರಿಕೆಗಳಿಂದ ಮಾಡಿದ ಫ್ಯಾನು, ಲಗೋರಿ, ಕಾಟನ್ ಕ್ಯಾಂಡಿ / ಬೊಂಬಾಯಿ ಮಿಠಾಯಿ, ಬರ್ಪಿ / ಐಸ್ ಕ್ರೀಮ್, ಪೇಪರ್ ದೋಣಿ, ಜಗಳ - ಉಪ್ಪು ಉಪ್ಪು ಕಣ್ಣೀರು, ಹೆದರಿಕೆ, ಮೊಂಡುತನ, ಭಂಡ ಧೈರ್ಯ, etc . .etc, ಎಲ್ಲಗಳ ವಿಚಿತ್ರ ಕಾಂಬಿನೇಶನ್ ಗೆ ಬಾಲ್ಯ ಅನ್ನಬಹುದು.

ಹುಣಸೆ ಹಣ್ಣು, ಮಾವಿನ ಕಾಯಿ ಎಗರಿಸುವ ಸಂಬ್ರಮ, ಆ ಕಡೆಯಿಂದ ಒಬ್ಬ ಫ್ರೆಂಡ್ ಮರಕ್ಕೆ ಕಲ್ಲೆಸದದ್ದು ಬಂದು ನನ್ನ ಮುಖಕ್ಕೆ ಅಪ್ಪಳಿಸಿದಾಗ ಮೂಗಿನಲ್ಲಿ ರಕ್ತ ಕಾರಂಜಿ, ರಜೆಗೆ ಅಜ್ಜಿ ಮನೆಗೆ ಹೋದಾಗ ಅಲ್ಲಿಯ ಫ್ರೆಂಡ್ಸ್ ಜೊತೆ ಜೇನು ಬಿಡಿಸಲು ಹೋಗಿ ಮುಖಕ್ಕೆ ಜೇನು ಹುಳು ಕಚ್ಚಿಸಿಕೊಂಡು ಮುಖ ಊದಿಸಿಕೊಂಡು ಅಜ್ಜಿ ಜೊತೆ ಜಗಳ ಮಾಡಿ ಜೇನು ತರಿಸಿಕೊಂಡು ತಿಂದು ಸಾಧನೆ ಮಾಡಿದ್ದು. ಹಬ್ಬಕ್ಕೆ ಅಡುಗೆ ಮಾಡಿಯಾದ ಮೇಲೆ ಎಲ್ಲರು ಹೊರಗಡೆ ಹೋದಾಗ ಸ್ಟೌವಿನ ಮೇಲೆ ಸುಮಾರು ಒಂದೂವರೆ ಲೀಟರ್ ಕಾದ ಅಡುಗೆ ಎಣ್ಣೆ ಇತ್ತು, ನಾನು ಹಪ್ಪಳ ಮಾಡ್ತೀನಿ ಅಂತ ಹೋಗಿ ಇಡೀ ಎಣ್ಣೆಯನ್ನ ಎಡಗಾಲಿನ ಮೇಲೆ ಚೆಲ್ಲಿಕೊಂಡು ಮನೆ ತುಂಬಾ ಭರತನಾಟ್ಯ ಮಾಡಿದ್ದೆ. ನನ್ನ ಕಾಲು ಹಪ್ಪಳದ ತರಾ ಸುಟ್ಟಿತ್ತು. ನಾಗರಾಜ್ ಹೋಗಿ ಕೆಲವು ತಿಂಗಳು 'ಹಪ್ಪಳರಾಜ' ಆಗಿದ್ದೆ. ಈಗಲೂ ಸ್ಟೌವ್ ಮೇಲೆ ಎಣ್ಣೆ ಇದ್ರೆ 'ದೂರ ಇರು' ಅಂತಾಳೆ ಅಮ್ಮ. ಆದ್ರೆ, ಬೆಂಗಳೂರಿನ ಮನೆಯಲ್ಲಿ ನಾನೇ ಹೆಡ್ ಕುಕ್ !!

summer ನಲ್ಲಿ ತುಂಗ-ಭದ್ರ ನದಿಯ ನೀರು ಕಡಿಮೆ, ರಭಸ ಕಡಿಮೆ ನಾವು ಅಂಬೋ ಅಂತ ಬೀಳ್ತಾಯಿದ್ವಿ, ಮನೆಯಿಂದ ಐದು ನಿಮಿಷ ನಡೆದರೆ ಸಾಕು ಕಾಲು ನದಿಯಲ್ಲಿರುತ್ತೆ. ಆಗಾಗ ಕೆಲವು ವೀಕೆಂಡ್ ಅಪ್ಪನ ಜೊತೆ ಗದ್ದೆಯ ಮರದಡಿಯಲ್ಲಿ lunch, ಗದ್ದೆಯ ನೀರಿನ ಪಂಪ್ ನಲ್ಲಿ ಸ್ನಾನ. ಸ್ಕೂಲ್ ನಲ್ಲಿ ಪಿಕ್ ನಿಕ್ ಹೊರಟರೆ ನನ್ನ ಕ್ಯಾರಿಯರ್ ನ ಒಂದು ಡಬ್ಬಿಯಲ್ಲಿ ಕೇಸರಿಬಾತ್, ಇನ್ನೊಂದರಲ್ಲಿ ಚಿತ್ರಾನ್ನ. ನಾನು ಬ್ರೆಡ್ಡು-ಜಾಮ್, ಕೇಕ್ ,ಚಿಪ್ಸ್,ಸಮೋಸ, ಪಿಜ್ಜಾ, ಬಿಸ್ಕೆಟ್ ಗಳನ್ನ ನನ್ನ ಕ್ಯಾರಿಯರ್ ನಲ್ಲಿ ಇಟ್ಕೊಂಡೇಯಿಲ್ಲ. ಅಮ್ಮ ಅವುಗಳಿಗೆ importance ಕೊಡ್ಲೇಯಿಲ್ಲ.

ಈಗ ಊಟ ಮಾಡದೆ ಮಲಗಿದರೆ, ಅಮ್ಮ- 'ಊಟ ಮಾಡು ಏಳು' ಅಂದ ತಕ್ಷಣ ಎಚ್ಚರ ಆಗಿಬಿಡುತ್ತೆ, ಅರೆಬರೆ ನಿದ್ದೆಯಲ್ಲಿ ಅಮ್ಮನ ತೊಡೆಯ ಮೇಲೆ ಮಲಗಿ ಅನ್ನ ಗುಳುಂ ಗುಳುಂ ಮಾಡೋ ಅವಕಾಶ ಮತ್ತಿನ್ಯಾವಾಗ ? ಅಪ್ಪ ಈವಾಗ ಐದು, ಹತ್ತು ರುಪಾಯಿ ಕೊಡೋದೆಯಿಲ್ಲ, ಬದುಕು ಎಷ್ಟು ಕ್ರೂರಿ ಅನ್ನಿಸೋದೇ ಆಗ. 'ಮತ್ತೆ ಸಿಗುವೆಯಾ ಒಮ್ಮೆ, ಪ್ಲೀಸ್' ಬಾಲ್ಯಕ್ಕೆ ಹೀಗೆ ಕೇಳೋದು ಅವಾಗ್ಲೇ. ಅಥವಾ ಇಂಥವೇ ಕೆಲವು ಸಂದರ್ಭಗಳಲ್ಲಿ, what do you say?

ಸ್ಕೂಲ್ ನಲ್ಲಿ ಇದ್ದಂತ ಎಲ್ಲಾ ಪದ್ಯಗಳಲ್ಲಿ, ಯಾವ ಪದ್ಯ ಮತ್ತು ಆ ಪದ್ಯದ ಲೇಖಕಿ ಈ ಎರಡು ಸ್ಪಷ್ಟವಾಗಿ ನೆನಪಿರೋದು ಅಂದ್ರೆ ಅದು ಒಂದೇ. ಬಹುಶಃ ಆ ಪದ್ಯವನ್ನ ಮತ್ತು ಲೇಖಕಿಯನ್ನ ನಾನು ಯಾವತ್ತಿಗೂ ಮರೆಯಲಾರೆ. ಆ ಪದ್ಯ ಯಾವುದು ಅಂದ್ರಾ ? 'ಸುಭದ್ರಕುಮಾರಿ ಚೌಹಾನ್' ವಿರಚಿತ 'ಮೇರಾ ನಯಾ ಬಚಪನ್' ನೀವು ಓದಿಲ್ಲ ಅಂದ್ರೆ ಖಂಡಿತವಾಗಿ ಓದಿ. ಇಂಟರ್ ನೆಟ್ ನಲ್ಲಿ ಸಿಗುತ್ತೆ.

ಬೆಂಗಳೂರಿನಲ್ಲಿ ಮೋಡ ಕವಿದ ಹವಾಮಾನ, ತುಂತುರು ಮಳೆ, ಮುಸುಲಧಾರೆ. ಹುಡುಕಿದರೂ ಒಂದು ಕಾಗದದಲ್ಲಿ ಮಾಡಿದ ದೋಣಿ ತೇಲಿ ಬರಲಿಲ್ಲ. ಹೀಗಾಗಿ ಒಮ್ಮೆಲೇ ಚಡ್ಡಿ ದಿನಗಳು ನೆನಪಾದವು. ಅದೆಷ್ಟು, ಪುಟ್ಟ ಪುಟ್ಟ ದೋಣಿಗಳು ತೇಲಿದವೋ, ಮಳೆಗೆ ನೆಂದು ಒಂದೇ ಸಂಜೆ ಅದೆಷ್ಟು ಸಲ ಬಟ್ಟೆ ಬದಲಿಸಿದೆವೋ.

ಮಳೆಯ ಸಂಜೆ ಅಂಗಳಲ್ಲಿ ಕೈ ಚಾಚಿ ಗಿರ ಗಿರ ತಿರುಗುವಂತೆ ಮಾಡಿದ, ಕಾಗದ ದೋಣಿಯ ದಿನಗಳ ನೆನಪುಗಳು; ನೆನಪಿನ ದೋಣಿಯಲಿ ಶಾಶ್ವತ, ನೀವೆನಂತೀರ ? ನನ್ನ ಕಾಗದ ದೋಣಿಯ ಕೆಲವು ನೆನಪುಗಳನ್ನ random order ನಲ್ಲಿ ಹೇಳಿದ್ದೇನೆ . . ಓದಿ ನಿಮ್ಮ ಬಾಲ್ಯ ನೆನಪಾದರೆ, ಬೈಟು ಕಾಫಿ ಕುಡಿಯೋಣ. ಬಿಲ್ ನಿಮ್ದೆ! ಓಕೆನಾ ?

ಒಟ್ಟಾರೆ ಹೇಳ್ಬೇಕು ಅಂದ್ರ ಚಡ್ಡಿ / ಲಂಗದ ದಿನಗಳೇ ಹಾಂಗ, ಮರೆತೇನೆಂದರೆ ಮರೆಯಲಿ ಹ್ಯಾಂಗ?
ಇದನ್ನ ಬರೆಯುವಾಗ ಮೊದಲಿಂದಲೂ ಕೊನೆವರೆಗೂ ನನ್ನೊಂದಿಗೆ ಇಬ್ಬರು ಮಹನೀಯರಿದ್ದರು, 'ಸುಧರ್ಶನ್ ಫಾಕಿರ್' ಮತ್ತು 'ಜಗಜಿತ್ ಸಿಂಗ್'. ಸುಧರ್ಶನ್ ಬರೆದಿದ್ರು ಜಗಜಿತ್ ಹಾಡ್ತಾಯಿದ್ರು,

"ಏ ದೌಲತ್ ಭಿ ಲೇಲೋ ಏ ಶೌಹರತ್ ಭಿ ಲೇಲೋ
ಭಲೇ ಚೀನ್ ಲೊ ಮುಜಸೇ ಮೇರಿ ಜವಾನಿ
ಮಗರ್ ಮುಜ್ಕೋ ಲೌಟಾದೋ ಬಚಪನ್ ಕ ಸಾವನ್
ಓ ಕಾಗಜ್ ಕೀ ಕಷ್ತಿ ಓ ಬಾರಿಷ್ ಕ ಪಾನಿ"

=====
=====

Oct 28, 2011

One hour with Dead love !!

ಇರೋ ಸಮಯವನ್ನ ಸರಿಯಾಗಿ ಉಪಯೋಗಿಸ್ಬೇಕು, ಕಾಲಹರಣ ಮಹಾಪಾಪ- ಹೀಗೆ ಸಮಯದ ಬಗ್ಗೆ ತುಂಬಾ ಮಹತ್ವದ ಮಾತುಗಳಿವೆ. ಆದ್ರೂ, ನಾವು ತುಂಬಾ ಟೈಮ್ ವೆಸ್ಟ್ ಮಾಡ್ತೀವಿ. ಟೈಮ್ ವೆಸ್ಟ್ ಮಾಡ್ತಿದೀನಿ ಅಂತ ಗೊತ್ತಿದ್ರು ಮತ್ತೆ ಹಾಳುಮಾಡ್ತಿವಿ. but, time is TIME, no compromise - no alternative.

ಕೆಲವು ಪ್ರೀತಿಯಲ್ಲೂ ಕೂಡ ಹಾಗೆ ಜೊತೆ ಇರೋ ತನಕ ಜಗಳ ಮತ್ತು ಜಗಳ. ಆದರೆ, ಒಂದು ದಿನ ಪ್ರೀತಿಯ ಜೀವ ದೂರ ಆಗುತ್ತೆ; ಅದೃಷ್ಟಕ್ಕೆ ಭಗವಂತ ಮತ್ತೆ ಒಂದು ತಾಸು ಹೋಗಿ ಬಾ ಅಂತ ಆ ಜೀವವನ್ನ ಭೂಮಿಗೆ ಕಳಿಸಿಕೊಡ್ತಾನೆ ಅಂತಿಟ್ಕೊಳ್ಳಿ ಆಗಲೂ ಜಗಳ ಮಾಡಿದ್ರೆ ಹೇಗೆ ? ನಂತರ ಸುಮ್ನೆ ಜಗಳ ಮಾಡಿದ್ದಾಯ್ತು ಪ್ರೀತಿಯಿಂದ ಮಾತಾಡೋಣ ಅಂದುಕೊಳ್ಳುವಷ್ಟರಲ್ಲಿ ಒಂದು ತಾಸು ಮುಗಿದುಹೊಗಿರುತ್ತೆ. ಆಗಲೇ ತಿಳಿಯೋದು ಒಂದು ತಾಸು ಅಂದ್ರೆ ಎಷ್ಟು ಚಿಕ್ಕದು ಅಂತ, ಥೇಟ್ exam hall ನಲ್ಲಿ ಅನಸ್ತದಲ್ಲ ಹಾಗೆ. ಒಮ್ಮೊಮ್ಮೆ ಆಫಿಸ್ನಲ್ಲಿ ಒಂದು ತಾಸು ಹೆಚ್ಚು ಕೆಲಸ ಮಾಡೋದು ಅಂತ ಆದ್ರೆ ಅದೆಷ್ಟು ಸಲ ಟೈಮ್ ನೋಡ್ಕೊಂಡಿರ್ತಿವೋ ಏನೋ.

we need to take right decisions, do right things at right time; am i right ?
all of us know it well but, we ARE as we WERE; am i right again ?

ಸಾವಿಗೆ ಸಂಭಂದಪಟ್ಟ ಕವಿತೆಗಳನ್ನ ಓದ್ತಾಯಿದ್ದೆ, ನೀವು ಓದಿ! ಇಂಗ್ಲೀಷ್ ಕವಿ, ನಾಟಕಕಾರ Stephen phillips ಅವರ ಕವಿತೆ ಇದು. ಓದಿ.

"A Dream"

My dead love came to me, and said:
'God gives me one hour's rest,
To spend with thee on earth again:
How shall we spend it best ?'

'Why, as of old,' I said; and so
We quarreled, as of old:
But, when I turned to make my peace,
That one short hour was told.
-- by Stephen phillips

Sep 28, 2011

"ಅಪ್ಪ-ಅಮ್ಮ & SEX"


ನಮಗಂತೂ ಆಗಲಿಲ್ಲ ಮಕ್ಕಳಾದರು ಓದಲಿ. ಚೆನ್ನಾಗಿ ಓದಲಿ. ಓದಿ ಜ್ಞಾನ ಸಂಪಾದನೆ ಮಾಡ್ಲಿ. ಒಳ್ಳೆ ಮನುಷ್ಯ ಆಗ್ಲಿ. ನಮಗ ಎಷ್ಟೇ ಕಷ್ಟ ಆದ್ರೂ ಪರವಾಗಿಲ್ಲ, ಮಗಳ ವಿದ್ಯಾಭ್ಯಾಸಕ್ಕೆ ಯಾವ್ದು ಆಡ್ದಿಯಾಗ್ಬಾರ್ದು. ಹೀಗೆ ಇದೆ ರೀತಿಯ ಹಲವಾರು ಆಸೆಗಳಿರುವ ಸಾಮಾನ್ಯ ಮದ್ಯಮ ವರ್ಗದ ತಂದೆ ತಾಯಿಗಳಂತೆ, ಅವರು ಕೂಡ. ತಮ್ಮ ಅದೆಷ್ಟೋ ಆಸೆ, ಕನಸುಗಳನ್ನ ಬಲಿಕೊಟ್ಟು ಓದಿಸಿದರು. ಮಗಳು ಈಗ ಬೆಂಗಳೂರಿನಲ್ಲಿ ಇಂಜೀನಿಯರ್ . "ಹುಡುಗೀನ ಯಾಕ ಓದಸ್ತೀರ ಮದುವೆ ಮಾಡಿ" ಆನ್ನೋ ಮಾತಿಗೆ ಗಮನ ಕೊಡದೆ ಮಗಳನ್ನ ಕಾಲೇಜಿಗೆ ಸೇರಿಸಿದ ಅವಳ, ಅಪ್ಪ-ಅಮ್ಮ ಎಂಬ ಆ ಎರಡು ಜೀವಗಳಿಗೆ ಅದೆಂಥದೋ ಹೇಳಲಾಗದ ಸಂಬ್ರಮ. ಅದೆಷ್ಟು ಕಷ್ಟ ಪಟ್ಟಿದ್ದವು ಆ ಜೀವಗಳು. ಬೆಂಗಳೂರಿನಿಂದ ಸರಿ ಸುಮಾರು 470 km ದೂರದ ಊರು ಅವರದು. ತಂದೆ-ತಾಯಿ ಇಬ್ಬರಿಗೂ ಬೆಂಗಳೂರು ಆಕಸ್ಮಿಕ ಮತ್ತು ಅಪಚಿತ.

ಆ ಊರಿನ ಮೊದಲ ಇಂಜೀನಿಯರ್ ಅವಳು, ಕಾಲೇಜಿನ ಕ್ಯಾಂಪಸ್ ಇಂಟರ್ವೀವ್ ನಲ್ಲೆ ಒಂದು ಕಂಪನಿಗೆ ಸೆಲೆಕ್ಟ್ ಆಗಿದ್ದಳು. ಡಿಗ್ರೀ ಕಂಪ್ಲೀಟ್ ಆದಮೇಲೆ ಸ್ವಲ್ಪ ದಿನ ಊರಲ್ಲಿ ಅಪ್ಪ-ಅಮ್ಮ ನೊಂದಿಗಿದ್ದು ಈಗ್ಗೆ ಕೆಲವು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದಾಳೆ - ಕಂಪನಿಯವರು joining date ಕೊಟ್ಟಿದಾರೆ. ಹುಡುಗಿಯರ paying guest ನಲ್ಲಿದಾಳೆ. ಕಂಪನಿಯಲ್ಲಿ ಇನ್ನೂ ಟ್ರೈನಿಂಗ್ ನಡೀತಾಯಿದೆಯಾದ್ದರಿಂದ ಸಂಬಳ ಸ್ವಲ್ಪ ಕಡಿಮೆ ಅದರಲ್ಲೇ ಸ್ವಲ್ಪ ಮನೆಗೆ ಕೊಡ್ತಾಯಿದಾಳೆ. ಅಪ್ಪ-ಅಮ್ಮನಿಗೋ ಮಗಳು ದುಡಿದು ನೂರು ರುಪಾಯಿ ಕೊಟ್ಟರು ಅವರ ಸಂತೋಷಕ್ಕೆ ಪಾರಾವೆಯಿರುವುದಿಲ್ಲ. ಮಗಳು ಕೊಡುವ ಕೆಲವು ಸಾವಿರ ರೂಪಾಯಿಗಳನ್ನ ತಾಯಿ ಅದೆಷ್ಟು ಬಾರಿ ಮುಟ್ಟಿ ಕಣ್ಣಿಗೊತ್ತಿಕೊಂಡು ಕಣ್ಣೀರಾದರೋ ಏನೋ - ತೀರದ ಆನಂದ ಭಾಷ್ಪ. ತಂದೆಗೆ ಏನನ್ನೋ ಸಾಧಿಸಿದ ಸಮಾಧಾನ. ದೂರದಲ್ಲೆಲ್ಲೋ, ಮಗಳು ಕೊಟ್ಟ ಹಣದಲ್ಲಿ ಮಗಳಿಗೇ ಸಣ್ಣ ಪುಟ್ಟ ಚಿನ್ನದ ಒಡವೆ ಖರೀದಿಸುವ ಕನಸು ಕಾಣುವ ತಾಯಿ. ಇನ್ನೂ ಮದುವೆ ತಯಾರಿ ಮಾಡ್ಕೊಬೇಕು ಅಂತ ವಿಚಾರ ಮಾಡೋ ತಂದೆ. . . .

. . . . .ಆದರೆ ದುರಂತ
ಇಂಜೀನಿಯರಿಂಗ್ 3 ನೇ ವರ್ಷದ ಕೊನೆಯಲ್ಲಿ ಕಂಪನಿಯೊಂದಕ್ಕೆ ಸೆಲೆಕ್ಟ್ ಆದ ಆ ಹುಡುಗಿ ನಂತರ ಬದಲಾಗಿದ್ದಳು. ಕೋತಿಗೆ ಹೆಂಡ ಕುಡಿಸಿದಂತಾಯ್ತು. ಜೋರು ಜೋರು ಪಾರ್ಟಿಗಳು ಶುರುವಾದವು, ಪ್ರತಿ ಕಂಪನಿಯಲ್ಲಿ ಸೆಲೆಕ್ಟ್ ಆದವರೆಲ್ಲ ಕೊಡುವ ಪಾರ್ಟಿ. ಮತ್ತೊಮ್ಮೆ ತೀರ ಆತ್ಮೀಯರಿಗೆ ಒಂದು ಪಾರ್ಟಿ.ಪಾರ್ಟಿಗಳಲ್ಲಿ ಬೇರೆ ಬೇರೆ ರೀತಿಯ ಮೋಜು ಮಸ್ತಿಗಳು ಇಷ್ಟವಾದವು, ಯೌವನ ನೆತ್ತಿಗೇರಿತು ಹಾಗೆ ಚಟಗಳು ಮೈಯಿಗೇರಿದವು. ಬೆಂಗಳೂರಿಗೆ ಬಂದಿರುವ ಆ ಹುಡುಗಿ ಇನ್ನೂ ಕಂಪನಿಗೆ join ಆಗಿಲ್ಲ ! ಆ ಹುಡುಗಿ, ladies paying guest ನಲ್ಲಿ ಇಲ್ಲ !! ಬೆಂಗಳೂರಿನಲ್ಲಿ ಒಬ್ಬ ಹುಡುಗನ ರೂಮಿನಲ್ಲಿದಾಳೆ !!! ಮನೆಯಲ್ಲಿ ತಂದೆ-ತಾಯಿಗೆ ಸುಳ್ಳು ಹೇಳಿ ಬಂದಿದ್ದಾಳೆ. ಡಿಸೆಂಬರ್ ನಲ್ಲಿ ಕಂಪನಿಯವರು ಜಾಯ್ನಿಂಗ್ ಡೇಟ್ ಕೊಟ್ಟಿದಾರೆ ಆದ್ರೆ ಇವ್ಳು ಬಂದಿರೋದು ಜುಲೈ ನಲ್ಲಿ ! no news about any crash course or something like that.

ಅದೆಷ್ಟೋ ಜನರ ಕೈ-ಕಾಲು ಹಿಡಿದು ಅಮಾಯಕ ತಂದೆ-ತಾಯಿ ಓದಿಸಿದ್ದರು. ತಮ್ಮ ಜೀವನದ ಆಶಾಕಿರಣ ಅಂತ ಭಾವಿಸಿರುವ ನಿಷ್ಕಲ್ಮಶ ಮನದ ಜೀವಗಳ ಮುದ್ದಿನ ಮಗಳ ಮೈ ಚಟಕ್ಕೆ ಬಿದ್ದುಬಿಟ್ಟಿದೆ - ಕಾಮಾತುರಣಂ ನ ಭಯಂ ನ ಲಜ್ಜಾ. ಪ್ರತಿ ಸಲ ಕಾಮಕ್ರೀಡೆ ಮುಗಿದ ಮೇಲೆ ಆ ಹುಡುಗ ಸೋಸಿಯಲ್ ನೆಟ್ವರ್ಕ್ ನಲ್ಲಿ ಬೇರೆಯ ರೀತಿಯಲ್ಲಿ ಅಪ್ಡೇಟ್ ಮಾಡ್ತಾನೆ ಈ ಹುಡುಗಿ ಅದನ್ನ ಲೈಕ್ ಮಾಡ್ತಾಳೆ. ಆ ಹುಡುಗಿ ಮನೆಗೆ ಕೊಡುವ ಹಣ ಆ ಹುಡುಗನದ್ದೆ !! ತಮ್ಮಿಬ್ಬರ ಈ ಕಳ್ಳ ವ್ಯವಹಾರ ತಮ್ಮ ಕಾಲೇಜಿನ ಕೆಲವರಿಗೆ ತಿಳಿದಿದೆ ಅಂತಲೂ ಅವರಿಗೆ ಗೊತ್ತು, ಆದರೂ ಯಾವ ಭಯ,ಸಂಕೋಚ ಅವರಿಗಿಲ್ಲ. ಹೆತ್ತವರ ಅಮಾಯಕತೆ, ಮುಗ್ಧತೆಯನ್ನ ದುರುದ್ದೇಶಕ್ಕೆ ಬಳಸಿಕೊಂಡವರು ಯಾರಿಗೆ ತಾನೇ ಹೆದರ್ತಾರೆ. 'ಇದು ತಪ್ಪಲ್ವಾ ?' ಅಂತ ಕೇಳಿದ್ರೆ 'ಅವಳಿಗೆ ಏನ್ ಬೇಕೊ ಅದನ್ನ, ನಾ ಕೊಡ್ತಿನಲ್ಲ ಮಗ' ಅಂತಾನೆ ಆ ಹುಡುಗ. ಮದುವೆ ಬಗ್ಗೆ ಕೇಳಿದ್ರೆ, ಅಂಥದೊಂದು ಇದಿಯಾ ಅನ್ನುವ ಹಾಗೆ ಮುಖ ನೋಡ್ತಾರೆ. ಇದನ್ನ ಓದಿದ ಮೇಲೆ ಆ ಹುಡುಗಿ, ಏನೂ ತಿಳಿಯದ 'ಮಾಸೂಮ್' ಅಂತೂ ಅಲ್ಲ ಅನ್ನೋದು ನಿಮಗೂ ಮನವರಿಕೆಯಾಗಿದೆ ಅನ್ಕೊಂಡಿದಿನಿ. so, They are not cheating on each other but, just ENJOYING together.

ದೊಡ್ಡ ದುರಂತ . . . .
ಈವರೆಗೆ ನೀವು ಓದಿದ್ದು ಕಾಲ್ಪನಿಕ ಕಥೆಯಲ್ಲ.

ಪ್ರಶ್ನೆಗಳು ::
1) 22 ವರ್ಷ ಪ್ರೀತಿ, ವಾತ್ಸಲ್ಯ, ಮಮಕಾರ, ಕಾಳಜಿ, ವಿದ್ಯಾಭ್ಯಾಸ, ಊಟ, ಬಟ್ಟೆ, ಹಣ ಎಲ್ಲಕ್ಕಿಂತ ಮುಖ್ಯವಾಗಿ ಜನ್ಮ ಕೊಟ್ಟ ಅಪ್ಪ-ಅಮ್ಮನಿಗೆ ಈ ಮಟ್ಟದ ನಯವಂಚನೆ, ನಂಬಿಕೆ ದ್ರೋಹ ಮಾಡಲು ಮನಸ್ಸಾದರೂ ಹೇಗೆ ಬರುತ್ತೆ ?
2) ಅಪ್ಪ-ಅಮ್ಮನ ವಾತ್ಸಲ್ಯದ ಬಿಸುಪಿಗಿಂತ ಹಾಸಿಗೆಯ ಮೇಲಿನ SEX ಹೆಚ್ಚು ಸುಖ,ಶಾಂತಿ, ನೆಮ್ಮದಿ ನೀಡುತ್ತಾ ?
3) ಕೇವಲ ಎರಡು ವರ್ಷಗಳ ಹಿಂದೆ ಪರಿಚಯವಾದವರ ಪ್ರೇಮ, ಮೈಥುನ; ತಂದೆ-ತಾಯಿಯೊಂದಿಗೆ ಐದು ತಿಂಗಳು(ಜುಲೈ -- ಡಿಸೆಂಬರ್) ಇರಲಾರದಷ್ಟು ಕೆರಳಿಸುತ್ತವಾ ? ಅಥವಾ, ತಂದೆ-ತಾಯಿ ಬೇಡವಾಗಿಬಿಡುತ್ತಾರಾ ?
4) ಟ್ರೈನಿಂಗ್ ನಲ್ಲಿ ಕಡಿಮೆ ಸಂಬಳ ಅಂತ ಹೇಳಿದ ಮಗಳು ಯಾವುದರ ಟ್ರೈನಿಂಗ್ ನಲ್ಲಿದ್ದಾಳೆ, ಇದೆ ಟ್ರೈನಿಂಗ್ ಆದ್ರೆ ನಂತರದ ವೃತ್ತಿ ?
5) ಊರ ತುಂಬಾ ತಮ್ಮ ಮಗಳು ಕಂಪನಿಯಲ್ಲಿ ದುಡಿದು ಹಣ ಕಳಿಸಿದಾಳೆ ಅಂತ ಹೇಳಿಕೊಳ್ಳುವ ತಂದೆ-ತಾಯಿಗಿದು ತಿಳಿದರೆ ಅವರು ಏನಾಗ್ತಾರೆ ?
6) now we are in relationship ಅಂತ ಹೇಳುವ ಇವರದು ಇದೇನು ಹಾದರವಾ ? ಆತ್ಮವಂಚನೆಯಾ ? ಟೈಮ್ ಪಾಸ್ ?ಅಥವಾ, ಯಾಮಾರಿ ಅಪ್ಪಿ-ತಪ್ಪಿ ಇದಕ್ಕೆ LOVE ಅಂತಾರ?
7) ನಿಜ ಹೇಳಿ, ಇಂಥವರು ಮದುವೆಯಾಗಿ ನೆಟ್ಟಗೆ ಸಂಸಾರ ಮಾಡ್ತಾರೆ ಅಂತ ನಿಮಗನ್ನಿಸುತ್ತಾ ? (ನನಗಂತೂ ಇಲ್ಲ)
8) ಮುಂದೆ ಈ ಹುಡುಗ, ಹುಡುಗಿಯನ್ನ ಮದುವೆಯಾಗೋ ಯಾವುದೋ ಹುಡುಗಿ, ಹುಡುಗನ ಪಾಡೇನು ?
9) ನಮ್ಮನ್ನ ಹೆತ್ತವರು ನಮ್ಮೊಂದಿಗೆ ಸಮಯ ಕಳೀಬೇಕು ಅಂತ ಕಾಯ್ತಿರ್ತಾರೆ, ಕಾಲೇಜ್ ನಲ್ಲಿ ನಡೆದ ಸಣ್ಣ ಸಣ್ಣ ಘಟನೆಗಳನ್ನ ಹೇಳುವಾಗ ಬೆರಗುಗಣ್ಣಿನಿಂದ ಕೇಳ್ತಾರೆ; ಇವು ನಮಗೆ ನೆನಪಾಗಲ್ವಾ ?
10) ಯಾವ ನೆಲದವರು ನಾವು ? ಎಲ್ಲಿರುವೆವು ? ಎಲ್ಲಿಗೆ ಹೊರಟಿರುವೆವು ? ಅಸಲಿಗೆ ಯಾರು ನಾವು ?

ಹೀಗೆ ನನಗೆ ನಾನೇ ಪ್ರಶ್ನೆ ಹರವಿಕೊಂಡು ಉತ್ತರ ಕೊಡುವ ಪ್ರಯತ್ನ ಮಾಡುತ್ತಾ, ತುಂಬಾ ಬೇಜಾರಾಗಿ ಇದ್ಯಾಕೆ ಹಿಂಗ್ ಮಾಡ್ತು ಹುಡುಗಿ ಅಂತ ಯೋಚಿಸ್ತಿರುವಾಗಲೇ. ಚಕ್ಕನೆ ಹೆಸರೊಂದು ಮಿಂಚಿದಂತಾಯ್ತು, ಅದು ಕೂಡ ಹುಡುಗಿಯ ಹೆಸರೇ - 'ಐರೊಮ್ ಚಾನು ಶರ್ಮಿಲ'. ಆಕೆ Iron lady of Manipur. ತನ್ನ 28 ನೇ ವಯಸ್ಸಿನಿಂದ Armed Forces (Spacial Powers)Act, 1958 (AFSA) ವಿರುದ್ದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾಳೆ ಶರ್ಮಿಲ. ಈಗ ಆಕೆಗೆ 39 ವರ್ಷ ವಯಸ್ಸು, ಅಂದ್ರೆ ಕಳೆದ ಹನ್ನೊಂದು ವರ್ಷಗಳಿಂದ ಶರ್ಮಿಲ ಉಪವಾಸವಿದ್ದಾಳೆ. ಪ್ರಪಂಚದ ಅತ್ಯಂತ ಕಿರಿಯ ವಯಸ್ಸಿನ 'Hunger striker' ಈವರೆಗೂ ಊಟ ಇಲ್ಲ, ನೀರು ಇಲ್ಲ. ಶರ್ಮಿಲ ಅವರ ಮೂಗಿಗೆ ಒಂದು ಪೈಪ್ ಇರುತ್ತೆ ಆ ಪೈಪ್ ಮೂಲಕ ದಿನ ಸ್ವಲ್ಪ ಹಣ್ಣಿನ ರಸ ಹನಿಹನಿಯಾಗಿ ಆಸ್ಪತ್ರೆಯವರು ಕೊಡ್ತಾರೆ. 11 ವರ್ಷಗಳಿಂದ ಶರ್ಮಿಲ ಅವರ ಮೂಗಿನ ಪೈಪ್ ಆಕೆಯ ದೇಹದ ಒಂದು ಭಾಗವೇನೋ ಎಂಬಷ್ಟರಮಟ್ಟಿಗೆ ಒಗ್ಗಿಹೋಗಿದೆ. ಊಟ ಮೂಗಿನ ಮೂಲಕ ಅದೂ ಸ್ವಲ್ಪ ಹನಿ ಹಣ್ಣಿನ ರಸ ಅಷ್ಟೇ - Oh My God. ತನ್ನ ಜನರ ಸಲುವಾಗಿ ತನ್ನ ಜೀವನವನ್ನೇ ಮುಡಿಪಾಗಿತ್ತು ಅವಿರತ ಹೋರಾಡುತ್ತಿರುವ 'ಶರ್ಮಿಲ' ಅವರ ಆತ್ಮಸ್ಥೈರ್ಯಕ್ಕೆ ನಮೋನ್ನಮಃ.

=====
=====

Sep 4, 2011

". . . . ಮತ್ತದೇ ನೆನಪು . . . ."

'ಇವತ್ತು ಸಂಜೆ ಕ್ಲಾಸ್ ಮುಗದ್ ಮೇಲೆ ಪ್ರಿನ್ಸಿಪಾಲ್ ಹತ್ರ permission ತೊಗೋಬೇಕು' ಹಾಗಂತಲೇ ಶುರುವಾಗುತ್ತಿತ್ತು ಮಾತು.
ಆ ದಿನಕ್ಕಿಂತ ಒಂದು ವಾರ ಮೊದ್ಲೇ ಒಬ್ಬ ಸ್ಟುಡೆಂಟ್ ಇಷ್ಟು ಹಣವನ್ನ ಕೊಡ್ಬೇಕು ಅಂತ ಕ್ಲಾಸ್ ನ ಸ್ಟುಡೆಂಟ್ representative announce ಮಾಡಿರ್ತಿದ್ದ. ಸರಿ, ಎಲ್ಲರು ಕೊಟ್ಟಾದಮೇಲೆ; ಮೊದಲೇ ಅಂದುಕೊಂಡ ಹಾಗೆ ಬಣ್ಣ ಬಣ್ಣದ paper cuttings, ಥರ್ಮೊಕೊಲ್, ಗಮ್ ಮತ್ತು decorationಗೆ ಬೇಕಾದ ಎಲ್ಲಾ ವಸ್ತುಗಳು ತರುವ ಕೆಲಸ.

ಪ್ರತಿ ದಿನ ಸಂಜೆ ಗುಂಪು ಗುಂಪಾಗಿ ಮಾರ್ಕೆಟ್ ಗೆ ಹೋಗಿ ನಮಗೆ ಬಂದಷ್ಟು ಚೌಕಾಸಿ ಮಾಡಿ ಆ ವಸ್ತುಗಳನ್ನ ತರ್ತಾಯಿದ್ವಿ . ನಾವು ಹೇಗೆ ಖರೀದಿ ಮಾಡ್ತಾಯಿದ್ವಿ ಅನ್ನೋದನ್ನ ನೆನಸಿಕೊಂಡ್ರೆ ಈಗ್ಲೂ ನಗು ಬರುತ್ತೆ. 'ಏ, ನಮ್ಮನೆ ಹತ್ರ ಅದು ಸಿಗುತ್ತೆ ಅಲ್ಲೇ ತೊಗೊಳೋಣ', 'ಏ ಇದು ನನ್ನ ಅಂಕಲ್ ಹತ್ರ ಇದೆ ನಾನೇ ತರ್ತೀನಿ ಬಿಡು' ಇಂತಹ ಮಾತುಗಳಲ್ಲಿ ವ್ಯಾಪಾರ ಮುಗೀತಿತ್ತು. ಒಂದು ವಸ್ತು ತರಲಿಕ್ಕೆ ಹೋದ್ರೆ ಎಂಟು-ಹತ್ತು ಜನ ಹೋಗ್ತಾಯಿದ್ವಿ. ಮಾರ್ಕೆಟ್ ನಲ್ಲಿ ಸಿಗೋದನ್ನ ಬಿಟ್ಟು ಅದೇ ವಸ್ತುವನ್ನ ಎಲ್ಲೋ ಗೆಳೆಯನ ಮನೆ ಹತ್ರ ಇರೋ ಚಿಕ್ಕ ಅಂಗಡಿಯಲ್ಲಿ ಖರೀದಿ. ಹುಡುಗಿಯರದು ಅಲಂಕಾರಕ್ಕೆ ಬೇಕಾದ ಬಣ್ಣ ಬಣ್ಣದ ರಂಗೋಲಿ ಪುಡಿ, ಸೀರೆಗಳನ್ನ ಮನೆಯಿಂದ ತರುವ department.
'ನೀನು ನಿರೂಪಣೆ ಮಾಡು, ಮಾಡ್ತಿಯ ತಾನೇ ?'

ಹೀಗೆ ಎಲ್ಲಾ ಕೆಲಸವನ್ನ ಹಂಚಿಕೊಂಡು ಶ್ರದ್ದೆಯಿಂದ ಮಾಡಿಯಾದ ಮೇಲೆ ಆ ದಿನ ಬರುತ್ತಿತ್ತು, ಆ ಮಾತು ಕೂಡ : 'ಇವತ್ತು ಸಂಜೆ ಕ್ಲಾಸ್ ಮುಗದ್ ಮೇಲೆ ಪ್ರಿನ್ಸಿಪಾಲ್ ಹತ್ರ permission ತೊಗೋಬೇಕು'. standing in-front of principal is always tough job. ಗುಂಪಾಗಿ ಎಲ್ಲರು ಪ್ರಿನ್ಸಿಪಾಲ್ ರೂಮ್ ಹತ್ರ ಹೋಗಿ ನಿಂತು 'ಏ ನೀ ಹೋಗು' , 'ಏ ನೀನೆ ಹೋಗೋ' ಅಂತ ಗುಸು ಗುಸು ಅಂತಿದ್ವಿ.

ಕೆಲವೊಬ್ಬರು ಸ್ವಲ್ಪ ಗಟ್ಟಿ ಧೈರ್ಯ ಮಾಡಿ ಪ್ರಿನ್ಸಿಪಾಲ್ ರೂಮಿನ ಮುಂದೆ ನಿಂತು
'ಮೇ ಐ ಕಮ್ ಮ್ಯಾಮ್ / ಸರ್' ಅನ್ನುವಷ್ಟರಲ್ಲಿ ಜೀವ ಹಾರಿ ಹೋದ ಅನುಭವ.
'ಯೆಸ್' ಅದೇ ಗಂಭೀರ ದನಿ. ಒಳಗೆ ಹೋದ ಮೇಲೆ ಯಾರಿಗೂ ಉಸಿರು ಅಷ್ಟು ಸಲೀಸಾಗಿ ಹೊರ ಬರುತ್ತಿರಲಿಲ್ಲ. ಹೊರಗೆ ನಿಂತವರಿಗೆ ಆ ರೂಮಿನಿಂದ ಏನೋ ವಿಸ್ಮಯ ಹೊರಬರಲಿದೆಯೇನೋ ಅನ್ನುವಷ್ಟು ಕಾತುರ.
ಪ್ರಿನ್ಸಿಪಾಲ್ ಕೇಳೋದು 'ಏನ್ರೋ?'
'ನಾಳೆ. . . ನಾಳೆಗೆ ಕ್ಲಾಸ್ ರೂಮ್ decorate ಮಾಡ್ಬೇಕು. ಅದಕ್ಕೆ, '
'ಅದಕ್ಕೆ ?'
'ಕ್ಲಾಸ್ ರೂಮ್ ಕೀ ಬೇಕಿತ್ತು'
ಯಾವ ಕ್ಲಾಸ್, ಯಾವ ಸೆಕ್ಷನ್, ಯಾರು ಕ್ಲಾಸ್ ಟೀಚರ್ ಎಲ್ಲಾ ಕೇಳಿದ ಮೇಲೆ 'ಓಕೆ' - permission granted.
ಅವತ್ತಿನ ದಿನದ requestನ್ನ ಯಾರೇ ಪ್ರಿನ್ಸಿಪಾಲ್ ಆಗಿದ್ರು ಅವ್ರು 'ನೋ' ಅನ್ನಲ್ಲ. ಆದರೂ ನಮಗೆ ಪ್ರತಿ ವರ್ಷ ಪ್ರಿನ್ಸಿಪಾಲ್ ರೂಮ್ ಮುಂದೆ ನಿಂತಾಗ ಹೆದರಿಕೆ ಆಗುತಿತ್ತು ಅನ್ನೋದು ಸುಳ್ಳಲ್ಲ.


ಎಲ್ಲಾ ಹುಡುಗ ಹುಡುಗಿಯರು ಸೇರಿ ಕ್ಲಾಸ್ ರೂಮಿನ ಅಲಂಕಾರ ಮಾಡಲು ಶುರು ಮಾಡುತ್ತಿದ್ದೆವು, ಏಳು ಗಂಟೆಯ ನಂತರ ಅದೇ ಊರಿನವರು ಮನೆಗೆ ಹೋಗ್ತಾಯಿದ್ರು. ನಾವು ಹಾಸ್ಟೆಲ್ ಹುಡುಗರು- ನೈಟ್ ಡ್ಯುಟಿ. ಮಧ್ಯರಾತ್ರಿವರೆಗೂ ಅಲಂಕಾರ: ಪಕ್ಕದ ಕ್ಲಾಸ್ ರೂಮಿನವರು ಏನ್ ಮಾಡ್ತಿದಾರೆ, ಎಷ್ಟು ಕೆ.ಜಿ ಕೇಕ್ ಆರ್ಡರ್ ಮಾಡಿದಾರೆ . . .ಇಂತವುಗಳ ಬಗ್ಗೆ discussion ಕೂಡ ನಡೆಯುತ್ತಿತ್ತು. decoration ಎಲ್ಲಾ ಮುಗೀತು ಅಂದುಕೊಳ್ಳುವಷ್ಟರಲ್ಲಿ 'ಬ್ಲ್ಯಾಕ್ ಬೋರ್ಡ್ ಮೇಲೆ ಬಣ್ಣದ ಚಾಕ್ ಪೀಸ್ ಗಳಿಂದ design ಮಾಡ್ಬೇಕು, sayings ಬರೀಬೇಕು, class teacher ಹೆಸರು ಬರೀಬೇಕು'. ಅಯ್ಯೋ ಮುಗೀತು ಅಂದ್ರೆ ಇನ್ನೂ ಕೆಲಸ ಇದೆ. 'ಬೇಗ ಮಲಗ್ರೋ ಬೆಳಗ್ಗೆ ಬೇಗ ಮಾರ್ಕೆಟ್ ಗೆ ಹೋಗಿ ಹೂವು ತರ್ಬೇಕು, ಬೇಕರಿಯಿಂದ snacks, ಕೇಕ್ ತರ್ಬೇಕು'.


ಈ ಎಲ್ಲಾ ಗಲಿಬಿಲಿ, ಸಂತಸ, ಹರಟೆ, amateur ಆದ ವ್ಯಾಪಾರ, ಪಕ್ಕದ ಕ್ಲಾಸ್ ನವರ ಜೊತೆ competition ಗಳ ದಾಟಿಕೊಂಡು 'ಬೆಳಕಿನೊಂದಿಗೆ' ಬಂದುಬಿಡುತ್ತೆ ಆ ದಿನ "September 5". ಅದೊಂದು ವಿದ್ಯಾರ್ಥಿ ಜೀವನದ ಮರೆಯಲಾಗದ ಪ್ರೀತಿಯ ದಿನ "ಶಿಕ್ಷಕರ ದಿನ". ಪ್ಲೇ ಗ್ರೌಂಡಿನಲ್ಲಿ 'HAPPY TEACHERS DAY' ಅಂತ ಜೋರಾಗಿ ಕೂಗುವುದರೊಂದಿಗೆ(ಕಿರುಚುವುದರೊಂದಿಗೆ) ಶುರುವಾಗುತ್ತಿತ್ತು ಸಂಬ್ರಮ. ಅಷ್ಟು ಜೋರಾಗಿ ಗ್ರೌಂಡಿನಲ್ಲಿ ಕಿರುಚಿದರೂ ಪ್ರಿನ್ಸಿಪಾಲ್ ಒಮ್ಮೆಯೂ ಬೈದಿಲ್ಲ. ಸುಮ್ನೆ ನಿಂತು ನೋಡಿ, ನಕ್ಕು ಹೋಗುತ್ತಿದ್ದರು, ಅದೇ ಬೇರೆ ದಿನ ಆಗಿದ್ರೆ, ಬೇರೆ ಏನಾದ್ರೂ ಕಿರುಚಿದ್ರೆ ? (ಯಪ್ಪಾ, ಬದುಕೋದು ಉಂಟೆ ?)


ಅವತ್ತಿನ ದಿನದ ಸಂಬ್ರಮವೇ ಸಂಬ್ರಮ . . . ಮೊದಲು auditorium ನಲ್ಲಿ ಕಡಿಮೆ ಅಂದ್ರು ಎರಡು ತಾಸುಗಳ ಕಾರ್ಯಕ್ರಮ ಶಾಲೆಯ ಎಲ್ಲರು ಅಲ್ಲಿರ್ತಾರೆ. ನಂತರ ಅವರವರ ಕ್ಲಾಸ್ ನಲ್ಲಿ celebration, ಕ್ಲಾಸ್ ಟೀಚರಿಂದ ಕೇಕ್ ಕತ್ತರಿಸುವ ಘಳಿಗೆಯಂತೂ ಎಲ್ಲರ ಕಣ್ಣಲ್ಲಿ ಚಕ್ ಚಕ್ ಅಂತ ಕ್ಲಿಕ್ ಆಗ್ತಿತ್ತು(9th standard ವರೆಗೆ ನಮ್ಮ ಹತ್ರ ಕ್ಯಾಮರ ಇರ್ಲಿಲ್ಲ). ಅದೃಷ್ಟಕ್ಕೆ 10th standard celebration ಫೋಟೋಸ್ ನನ್ನತ್ರ ಇವೆ. ಕೆಲವರು ಶಾಲೆಯ ಬಗ್ಗೆ, ಟೀಚರ್ಸ್ ಬಗ್ಗೆ ಒಪಿನಿಯನ್ ಹೇಳ್ತಾಯಿದ್ರು, ನಂತರ ಕೆಲ ಟೀಚರ್ಸ್ ಮಾತಡ್ತಾಯಿದ್ರು ಕೊನೆಗೆ ಕ್ಲಾಸ್ ಟೀಚರ್ (ಎಲ್ಲರವು positive opinion). ನಮಗೆ subject handle ಮಾಡಿದ ಟೀಚರ್ಸ್ ಗೆ ನೆನಪಿನ / ಗೌರವದ ಕಾಣಿಕೆಯಾಗಿ ಪುಸ್ತಕಗಳನ್ನ ಕೊಡ್ತಾಯಿದ್ವಿ. ಆ ನಡುವೆ ಪ್ರಿನ್ಸಿಪಾಲ್ ಎಲ್ಲಾ ಕ್ಲಾಸ್ ಗಳನ್ನ ವಿಸಿಟ್ ಮಾಡ್ತಾಯಿದ್ರು. ಆಹಾ, ಖುಷಿಯೋ ಖುಷಿ.


ನಾವು ಹಾಸ್ಟೆಲ್ ಹುಡುಗರು ವಾರ್ಡನ್ ಗಳಿಗೆ ವಿಶ್ ಮಾಡಿ, ರಾತ್ರಿ ಊಟದ ಮುಂಚಿನ ಪ್ರಾರ್ತನೆಯ ಕೊನೆಗೆ ಅವರಿಗೆ 'ಥ್ಯಾಂಕ್ಸ್' ಹೇಳ್ತಾಯಿದ್ವಿ (ನಮ್ಮನ್ನ ವರ್ಷಾನುಗಟ್ಟಲೆ ಸಹಿಸಿಕೊಂಡಿದ್ದಕ್ಕೆ).
ಎಷ್ಟು ಚೆಂದದ ದಿನಗಳವು, ನನ್ನಲ್ಲಿ ಇನ್ನೂ ಹಸಿ ಹಸಿ . . . ನೆನೆದರೆ ಈಗಲೂ ಕಣ್ಣುಗಳು ಮೆಲ್ಲಗೆ ಹಸಿ.

ನಮ್ಮಂತ ಸೀನಿಯರ್ಸ್ ನಮ್ಮಂತ ಜೂನಿಯರ್ಸ್ ಸಲುವಾಗಿ , ಹಾಸ್ಟೆಲ್ ಬಿಲ್ಡಿಂಗ್ ನ ಕಬ್ಬಿಣದ ಗೇಟ್ ನಲ್ಲಿ '+' ಆಕಾರದಲ್ಲಿದ್ದ ಎರಡು ಸರಳುಗಳನ್ನ ಕಿತ್ತು ಕಿಂಡಿ ಮಾಡಿದ್ರು !! ಅದರ ಮೂಲಕ ಒಬ್ಬೊಬ್ಬರೇ ಹೊರ ಬಂದು, ಆದಷ್ಟು ಕತ್ತಲಲ್ಲೇ ಮೆಲ್ಲಗೆ ಓಡುತ ಹೋಗಿ (ಸೆಕ್ಯುರಿಟಿ ಕಣ್ಣಿಗೆ ಬೀಳದೆ) ಕಂಪೌಂಡ್ ಜಿಗಿದು ಸಿನಿಮಾ ನೋಡಿದ್ದು, ಗಲ್ಲಿ ಗಲ್ಲಿ ತಿರುಗಿ ಗಣೇಶ ಉತ್ಸವದಲ್ಲಿ ಪಾಲ್ಗೊಂಡಿದ್ದು. ಹಾಸ್ಟೆಲ್ ನಲ್ಲಿ ಇಡುತ್ತಿದ್ದ ಒಬ್ಬ ಗಣಪನ ಮುಂದಿದ್ದ ದೀಪ ಆರದಂತೆ ಕಾಯಲು ಕನಿಷ್ಠ 15 ಜನ, 5 ದಿನ ಶಾಲೆಗೆ ಚಕ್ಕರ್ ಹೊಡೆದದ್ದು. NCC ಡ್ರೆಸ್ ನಲ್ಲಿ ಫೋಟೋ ತೆಗೆಸಿಕೊಂಡದ್ದು, ಗೋವಾ ದಲ್ಲಿನ 14 ದಿನದ ನ್ಯಾಷನಲ್ ಟ್ರೆಕ್ಕಿಂಗ್ ಕ್ಯಾಂಪ್ .


ಹಾಸ್ಟೆಲ್ ನಲ್ಲಿ ನಾವು ಸ್ಟ್ರೈಕ್ ಮಾಡ್ತಿದ್ದದು ವಿಚಿತ್ರವಾಗಿತ್ತು : ಒಂದು ದಿನ ಎಲ್ಲರು ಇವತ್ತು ಬರೀ ಚಪಾತಿ ತಿನ್ಬೇಕು ಅಥವಾ ಬರೀ ಅನ್ನ ತಿನ್ಬೇಕು ಆಗ ಅದು shortage ಆಗುತ್ತೆ ಮತ್ತೆ ನಾಳೆ ಹಾಗಂತ ಪ್ರಿನ್ಸಿಪಾಲ್ ಗೆ ಕಂಪ್ಲೇಂಟ್ ಮಾಡೋದು. ಹೀಗೆ ಅಡುಗೆ ಭಟ್ಟರಿಗೆ ನಮ್ಮ ಅಸಮದಾನವನ್ನ ಮನವರಿಕೆ ಮಾಡುತ್ತಿದ್ದೆವು. ಕೆಲವೊಮ್ಮೆ ಹುಣ್ಣಿಮೆಯ ದಿನ 'ಬೆಳದಿಂಗಳ ಊಟ' ಇರುತ್ತಿತ್ತು - ಹಾಸ್ಟೆಲ್ ಮುಂದಿನ ಗ್ರೌಂಡಿನಲ್ಲಿ ಗುಂಪು ಗುಂಪಾಗಿ ಕೂತು ಒಂದೇ ತಟ್ಟೆಯಲ್ಲಿ ಊಟ. ಒಮ್ಮೆ ರಾತ್ರಿ ಸಿನಿಮಾ ನೋಡಲು ಹೋದಾಗ ವಾರ್ಡನ್ ಮಧ್ಯರಾತ್ರಿ attendance ತೊಗೊಂಡಿದ್ರು - needless to say we were punished. ನಾವು ವರ್ಷದ ಕೊನೆಯಲ್ಲಿ 'ಹಾಸ್ಟೆಲ್ ಡೇ' celebrate ಮಾಡ್ತಿದ್ವಿ with lot of cultural / funny activities. school ಕಿಡಕಿಯ ಸುಮಾರು ಐವತ್ತಕ್ಕೂ ಹೆಚ್ಚು ಗ್ಲಾಸ್ ಗಳನ್ನ ವಿನಾಕಾರಣ ಒಡೆದು ಹಾಕಿದಾಗ, ಪ್ರಿನ್ಸಿಪಾಲ್, ನಮ್ಮ ಮನೆಗೆ ಫೋನ್ ಮಾಡುವುದಾಗಿ ಹೆದರಿಸಿ, ನಮ್ಮನ್ನ suspend ಮಾಡುವ ಮಟ್ಟಿಗೆ ಯೋಚನೆ ಮಾಡಿದ್ದು ಆಗ ಹಾಸ್ಟೆಲ್ ವಾರ್ಡನ್ ದೇವರಂತೆ ಬಂದು ನಮ್ಮನ್ನ ಕಾಪಾಡಿದ್ದರು - Apology letter ಬರೆದದ್ದು ಆಯಿತು.

Exams ಹತ್ರಯಿದ್ದಾಗ ರಾತ್ರಿ ಪ್ಲೇ ಗ್ರೌಂಡಿನ ಲೈಟಿನ ಬೆಳಕಿನಲ್ಲಿ ಓದೋದು - 'ವಿಶ್ವೇಶಯ್ಯ, ಅಂಬೇಡ್ಕರ್ ಹಿಂಗೆ ಓದಿದ್ದು' ಅಂತ ನಾವು ನಾವೇ ಅಂದುಕೊಂಡು ನಗ್ತಿದ್ವಿ. ಬೆಳಗ್ಗೆ ಆರು ಗಂಟೆಗೆ, PT ಸರ್ ಬಂದು ಎಚ್ಚರಿಸಲು ರೂಮಿನ ಬಾಗಿಲು ಮುರಿದು ಹೋಗುವಂತೆ ಬಾರಿಸುತ್ತಿದ್ರು - ನಾವು ಒಮ್ಮೊಮ್ಮೆ ಎಚ್ಚರವಾಗಿದ್ರೂ ಬಾಗಿಲು ತೆರೀತಾಯಿರ್ಲಿಲ್ಲ (PT ಸರ್ ಬಂದು ಎಚ್ಚರಿಸೋದು exam time offer !!). ರೂಮಿನ ಬಾಗಿಲನ್ನ ಸ್ವಲ್ಪವೇ ಸ್ವಲ್ಪ ತೆರೆದು ಒಳಗಡೆಯಿಂದ ಕದದ ಮೇಲೆ ನಮ್ಮ ಶೂಗಳನ್ನ ಇಡುತ್ತಿದ್ದೆವು, ಯಾರಾದರು ಬಾಗಿಲು ತಳ್ಳಿಕೊಂಡು ಒಳ ಬಂದರೆ ಅವರ ತಲೆ ಮೇಲೆ 'ಶೂ' ಅಭಿಷೇಕ. ಒಮ್ಮೆಮ್ಮೆ ವಾರ್ಡನ್ ಗಳ ತಲೆ ಮೇಲೆ ಬಿದ್ದಿದ್ದವು - ಆಗ ನಮ್ಮ ಗತಿ ಏನಾಗಿರಬಹುದು?
ನೀವು ಊಹೆ ಮಾಡ್ತೀರ ಅನ್ಕೊಂಡಿದೀನಿ . . . . ನಾವು ಮಾಡಿದ್ದು ಒಂದೇ ಎರಡೇ?

ಎಲ್ಲಿದ್ದಾರೋ, ಹೇಗಿದ್ದಾರೋ ತಿಳುವಳಿಕೆ ಹೇಳಿ, ಓದು - ಬರಹ ಕಲಿಸಿಕೊಟ್ಟು,
'may god bless you' - 'wish you all the best for you future' ಅಂತ ಮನಸಿನಿಂದ ಹಾರೈಸಿ ನಮ್ಮನ್ನ ಶಾಲೆಯಿಂದ ಕಳಿಸಿಕೊಟ್ಟ :
ಗುರುಗಳು, ಸಹಿಸಿಕೊಂಡ ವಾರ್ಡನ್ ಗಳು- ಅಡುಗೆ ಭಟ್ಟರು, 'ಈಗ ಬ್ಯಾಡ ಆಮೇಲೆ ಬರ್ರಿ ಪ್ರಿನ್ಸಿಪಾಲ್ ಗರಂ ಆಗ್ಯಾರ' ಅಂತ ಹೇಳಿ ಕಳಿಸುತ್ತಿದ್ದ ಪಿವನ್, ಪ್ರತಿ ದಿನ ಬೆಳಗ್ಗೆ ಆರು ಗಂಟೆಗೆ ಬಾಗಿಲು ಬಡಿಯುತ್ತಿದ್ದ ಸೆಕ್ಯುರಿಟಿ ಗಾರ್ಡ್, ರಾತ್ರಿ ಕಂಪೌಂಡಿನ ಹೊರಗೆ ತಳ್ಳುಗಾಡಿಯಲ್ಲಿ ಅಂಗಡಿ ಇಟ್ಟುಕೊಂಡು, ಒಳಗೆ ಇರುತ್ತಿದ್ದ ನಮಗೆ ಪಲಾವ್, ಆಮ್ಲೆಟ್, ಎಗ್ ರೈಸ್ ಪಾರ್ಸಲ್ ಕೊಡುತ್ತಿದ್ದ ಆತನ ಹೆಸರೇನು ? ಇಲ್ಲ ನೆನಪಿಲ್ಲ, ಅಸಲಿಗೆ ನಾವು ಕೇಳಿಯೇ ಇಲ್ಲ. ಎಲ್ಲವನ್ನ ಜೊತೆಗೆ ಸಂಬ್ರಮಿಸಿದ ಗೆಳೆಯರು. ಎಲ್ಲೇ ಇದ್ದರೂ, ಎಲ್ಲರು ಚೆನ್ನಾಗಿರಲಿ.

ಹೇಳುತ್ತಾ ಹೋದರೆ ಇದು ಮುಗಿಯುವ ಮಾತ? ಖಂಡಿತ ಅಲ್ಲ.
ಅಪ್ಪ-ಅಮ್ಮ, ಶಾಲೆಯಲ್ಲಿ ಕಲಿಸಿದ ಟೀಚರ್ಸ್ , ತಿಳಿದೋ - ತಿಳಿಯದೋ ಏನನ್ನೋ ಕಲಿಸಿಕೊಟ್ಟ ಅಪರಿಚಿತರು ಮತ್ತು ಪರಿಚಿತರು ಹಾಗು ದಿನ ದಿನವೂ ಹೊಸದನ್ನ ತೋರಿಸುವ, ಕಲಿಸುವ ಇಷ್ಟು ಚಂದದ ಬದುಕು - ಈ ಎಲ್ಲಾ ಗುರುಗಳಿಗೂ ಶಿಕ್ಷಕರ ದಿನದಂದು ಗೌರವದಿಂದ ನಮಿಸುತ್ತೇನೆ.
"ಕಲಿಯುವವರಿಗೆ ತಕ್ಕ ಗುರು ಸಿಗಲಿ - ಗುರುವಿಗೆ ತಕ್ಕ ವಿದ್ಯಾರ್ಥಿ ಸಿಗಲಿ" ಎನ್ನುವುದಷ್ಟೇ ಪ್ರಾರ್ಥನೆ.
(ಅದೆಷ್ಟೋ ಮರೆಯದೆ ಉಳಿದ ನೆನಪುಗಳಲ್ಲಿ ಇದೂ ಒಂದು)
=====
=====

Aug 23, 2011

ಕಾದಿದ್ದು ಬರೋಬ್ಬರಿ ಅರ್ಧ ಶತಮಾನ !!

ರಣ ಬಿಸಿಲಿನ ಬಳ್ಳಾರಿಯಲ್ಲಿ ತಣ್ಣಗೆ ಎರಡು ಯೌವನದ ಎದೆಗಳ ನಡುವೆ ಪ್ರೇಮವೊಂದು ಮೊಳಕೆಯೋಡೆದಿತ್ತು.
ತುಂಡು ಲಂಗದ ಅವಳನ್ನ, ಪಾಪದ ಗರ್ಭದಿಂದ ಹುಟ್ಟಿದ ಚಲಪತಿ ಅದಿನ್ಯಾವ ಮಟ್ಟಿಗೆ ಪ್ರೀತಿಸಿದನೆಂದರೆ ಊಟ, ನಿದ್ದೆ , ಕೆಲಸ ಉಹುಂ ಯಾವುದೆಂದರೆ ಯಾವುದು ಕೂಡ ಅವನತ್ತ
ಸುಳಿಯಗೊಡಲಿಲ್ಲ . ಪತ್ರಗಳು ಅವ್ಯಾಹತವಾಗಿ ಹರಿದಾಡಿದವು. ಅವಳನ್ನ ತನ್ನ ಮಗ ಈ ಪರಿ ಪ್ರೀತಿಸುವುದನ್ನ ಕಂಡ ಚಲಪತಿಯ ತಾಯಿಯೇ "ಇಷ್ಟೊಂದು ಪ್ರೀತಿಸಬೇಡ ಮಗನೆ, ಯಾವ ಹೆಣ್ಣೂ ಇಷ್ಟು ಪ್ರೀತಿಗೆ ಅರ್ಹಳಲ್ಲ" ಅಂತ ಹೇಳುತ್ತಾಳೆ. ಆದ್ರೆ, ಅವನ ತಲೆಯ ಮೇಲೆ ಪ್ರೇಮದ ಭೂತಸವಾರಿ.

ಮುಂದುವರಿದ ದಿನಗಳಲ್ಲಿ ಆ ಹುಡುಗಿ ಚಲಪತಿಯನ್ನ ವಿನಾಕಾರಣ ದೂರಮಾಡ್ತಾಳೆ, ಬೇರೊಬ್ಬನೊಂದಿಗೆ ಮದುವೆ ಆಗ್ತಾಳೆ. ಆಗಲೇ ಚಲಪತಿ ಅವಳ ಗಂಡನ ಸಾವಿಗಾಗಿ ಕಾಯಲಾರಂಭಿಸುತ್ತಾನೆ !!

ಕಾಯುತ್ತಾ ಕಾಯುತ್ತಾ ತಾನೂ ಬೆಳೆಯುತ್ತಾನೆ - ಸಾಮಾಜಿಕವಾಗಿ, ಆರ್ಥಿಕವಾಗಿ; ಮುಂದೆಂದೋ ಒಂದು ದಿನ ಅವಳು ತನ್ನತ್ತ ಬಂದಾಗ ಯಾವುದೇ ಕೊರತೆ ಕಾಣಬಾರದಲ್ಲ ಅದಕ್ಕೆ. ತನ್ನ ಮಗ ಅವಳನ್ನಲ್ಲದೆ ಬೇರೆ ಯಾರನ್ನೂ ಮದುವೆಯಾಗಲಾರ ಅಂತ ಚಲಪತಿಯ ತಾಯಿಗೆ ಮನವರಿಕೆಯಾಗಿರೂತ್ತೆ. ಹಾಗಾಗಿ ಆಕೆ, ಮಗ ಚಲಪತಿ ದೈಹಿಕ ಸುಖವಾದರೂ ಪಡೆಯಲಿ ಅಂತ ಒಬ್ಬ ವಿಧವೆಯನ್ನ ಒಪ್ಪಿಸುತ್ತಾಳೆ - ಆ ವಿಧವೆಗೂ ಅದರಿಂದ ಲಾಭವಿರುತ್ತೆ. ಚಲಪತಿ ದೈಹಿಕ ಕ್ರಿಯೆಯಲ್ಲಿ ತೊಡಗುತ್ತಾನೆ ಕೂಡ -ಒಂದೆರಡು ಬಾರಿ. ತಾಯಿಯೇ ಮಗನ ದೈಹಿಕ ಸುಖಕ್ಕಾಗಿ ಪರಧರ್ಮದ ವಿಧವೆಯನ್ನ ತನ್ನ ಮನೆಯಲ್ಲೇ ಮಲಗಿಸುವ ಕೆಲಸ ಮಾತ್ರ ಒಂದು ತೆರನಾದ ಕಂಪನ ಉಂಟು ಮಾಡುತ್ತೆ.

ದಿನಗಳು ಉರುಳತ್ತಲೇ ಇರುತ್ತವೆ, ಮುಪ್ಪು ಮರೆಯಲ್ಲಿ ನಿಂತು ಹೊಂಚು ಹಾಕಿ ಕುಳಿತಿರುತ್ತೆ. ಚಲಪತಿ ತನ್ನನ್ನ ತಿರಸ್ಕರಿಸಿದ ಹುಡುಗಿಯ ಸಲುವಾಗಿ ಕಾಯುತ್ತಲೇ ಇರುತ್ತಾನೆ. ತನ್ನೊಳಗಿನ ನೋವನ್ನ ಯಾರಿಗಾದರೂ ಹೇಳಲು ಅವನಿಗಾಗುವುದಿಲ್ಲ. ಎಲ್ಲಾ ತಿಳಿದ ಅವನ ತಾಯಿಯೂ ಸತ್ತುಹೊಗುವಳು. ಆಗಲೇ ಚಲಪತಿಗೆ ಅನಿಸುವುದು 'ಬಾಲ್ಯ ಮತ್ತು ಯೌವನ ಮುಗಿದವು' ಅಂತ.

ಚಲಪತಿಯ ಪ್ರೇಮದೇವತೆ ತನ್ನದೇ ಸಂಸಾರ, ಪ್ರತಿಷ್ಠೆ, ಗೌರವ ಎಲ್ಲವನ್ನ ಅನುಭವಿಸುವಾಗ ತನ್ನನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಚಲಪತಿ ಆಕೆಗೆ ನೆನಪೇ ಆಗುವುದಿಲ್ಲ. ತನ್ನದು ತಪ್ಪು ಅಂತ ಒಪ್ಪಲು ಅವಳ ಅಹಂ ಅಡ್ಡಿಪದಿಸುತ್ತೆ. ಚಲಪತಿ ಒಬ್ಬ ಅಸ್ತಿತ್ವದಲ್ಲೇ ಇಲ್ಲದವನು, ಅವನು ಕೇವಲ ನೆರಳು ಮಾತ್ರ ಅಂದುಕೊಂಡಿರುತ್ತಾಳೆ.

ಒಂದು ದಿನ ಚಲಪತಿಗೆ ಸುದ್ದಿ ಬರುತ್ತೆ, ಅವನ ಪ್ರೀತಿಯ ಹುಡುಗಿಯ ಗಂಡ ಕೊನೆಯುಸಿರೆಳೆದ ಸುದ್ದಿಯದು. ಕೊನೆಗೂ ಚಲಪತಿ ಕಾಯುತ್ತಿದ್ದ ದಿನ ಬಂದಿತ್ತು. ಅವಳ ಗಂಡ ಸತ್ತು ಇನ್ನೂ ದಿನಗಳೇ ಕಳೆದಿರಲಿಲ್ಲ ಆಗ ಮತ್ತೊಮ್ಮೆ ಚಲಪತಿ, ಆಕೆಯ ಮುಂದೆ ನಿಂತು ಇನ್ನೂ ಜೀವಂತವಾಗಿರುವ ತನ್ನ ಪ್ರೇಮ ತೋಡಿಕೊಳ್ಳುತ್ತಾನೆ -ಬರೋಬ್ಬರಿ ಅರ್ಧಶತಮಾನಗಳ ನಂತರ !!!
ಪ್ರೇಮ ಮತ್ತು ಮುಪ್ಪು ಎರಡೂ ನಿರ್ಲಜ್ಜತೆಗೆ ದೂಡುತ್ತವೆ.

ಮುಪ್ಪಿನಲ್ಲಿ ಮತ್ತೆ ಪತ್ರಗಳು ಶುರುವಾಗುತ್ತವೆ.
ಆ ಪಕ್ವ ಹೃದಯಗಳ ಆಂತರ್ಯದಲ್ಲಿ ಮಾತಿಗೆ ಮೀರಿದ ಪ್ರೀತಿಯೊಂದು ಮಡುವುಗಟ್ಟಿ ನಿಂತಿತ್ತು . ಅಲ್ಲಿಗೆ ಮುಗಿಯುತ್ತೆ ಕಥೆ. ಎಪ್ಪತ್ತು ವಯಸ್ಸು ದಾಟಿದ ಅವರಿಬ್ಬರೂ ಒಂದಾದರೋ ಇಲ್ಲವೊ ನೀವೇ ಓದಿ ತಿಳಿಯಬೇಕು. ಚಲಪತಿಯನ್ನ ಅರ್ಧ ಶತಮಾನ ಕಾಯುವಂತೆ ಮಾಡಿದವಳ ಹೆಸರು "ಮಾಂಡೋವಿ".

'ರವಿ ಬೆಳಗೆರೆ' ಯವರ ಕಾದಂಬರಿಯಿದು 'ಮಾಂಡೋವಿ'. ಒಂದು ಬೇರೆಯದೇ ಭಾವವನ್ನುಂಟುಮಾಡುವ, ಅಲೆಯೆಬ್ಬಿಸುವ ಕಾದಂಬರಿ. ಓದದಿದ್ದರೆ ನೀವು ಓದಬೇಕು. ಮಾಂಡೋವಿ ಖಂಡಿತವಾಗಿ ಹತ್ತಿರವಾಗ್ತಾಳೆ, ಏಕಾಂತದಲ್ಲಿ ನೆನಪಾಗುತ್ತಾಳೆ. ಮಾಂಡೋವಿ (ಗೋವಾ ರಾಜ್ಯದ ಪ್ರಮುಖ ನದಿಯ ಹೆಸರು) ನಿಲ್ಲದೆ ಹರಿಯುತ್ತಾಳೆ. ಲೇಖಕ ರವಿ ಬೆಳಗೆರೆಯವರು ಸಮರ್ಥವಾಗಿ ಮಾಂಡೋವಿಯನ್ನ ತೋರಿಸುತ್ತಾ ಕೆಲವೇ ಜನ ಅನುಭವಿಸುವ ಪ್ರೇಮದ ಇನ್ನೊಂದು ಮಗ್ಗುಲನ್ನ ತೆರೆದಿಡುತ್ತಾರೆ.

ಮಾಂಡೋವಿ, ಪ್ರಖ್ಯಾತ ಲೇಖಕ
'ಗ್ಯಾಬ್ರಿಯಲ್ ಗಾರ್ಸಿಯ ಮಾರ್ಕ್ವೆಜ್' (Gabriel José de la Concordia García Márquez) ಅವರ 'ಲವ್ ಇನ್ ದ ಟೈಮ್ ಆಫ್ ಕಾಲರ' ಕಾದಂಬರಿಯ ಪ್ರೇರಣೆ.

ಸೂಚನೆ :: ಇದು 'ಮಾಂಡೋವಿ'ಯ ವಿಶ್ಲೇಷಣೆ, ವಿಮರ್ಶೆ ಅಥವಾ ಇನ್ಯಾವುದೋ ರೀತಿಯ ತರ್ಕಗಳಿಗೆ ನೇತಾಡುವ ಬರಹವಲ್ಲ.
ಇದೊಂದು ಕೇವಲ ಕಾದಂಬರಿಯನ್ನ ಪರಿಚಯಿಸುವ ಪ್ರಯತ್ನ ಅಷ್ಟೇ.

=====
=====


Aug 11, 2011

"ಎಲ್ಲರು ಕುಡುಕರಲ್ಲ . . . !!"

'ಬಾರ್' ಗೆ ಬಂದವರನ್ನೆಲ್ಲಾ ಕುಡುಕರೆಂದರೆ ಜೋಕೆ !!
ಕುಡುಕರಾಗಲು ಅರ್ಹತೆ ಬೇಕು, ಸ್ಥಾನಮಾನಗಳು ಬೇಕು
ಎಲ್ಲರು ಕುಡುಕರಾಗಲಾರರು,
ಅದಕ್ಕೂ ಪ್ರತಿ ಸಂಜೆ ದೀರ್ಘ ತಪಸ್ಸು ಮಾಡಬೇಕು

ತೀರ್ಥಕ್ಷೆತ್ರದಲ್ಲಿ ಕುಡಿದು, ಒಂದು ಗ್ಲಾಸನ್ನೋ ಬಾಟಲಿಯನ್ನೋ
ಟೇಬಲ್ಲಿಗೆ ಕುಟ್ಟಿ ಎದ್ದು ಹೋಗುವನು ಕುಡುಕನಲ್ಲ !!!
ಇಡೀ ಕುಡುಕ ಸಂತತಿಗೆ ಅವನು - ಅವಮಾನ, ಅಸಹ್ಯ
ನೇರವಾಗಿ ಮನೆಗೆ ಹೋದರಂತೂ, ಧರ್ಮದ್ರೋಹಿ

ಕುಡಿದು ಕುಡಿದು ಕುಡಿಯುತ್ತಲೇ ತೇಲಾಡುತ್ತಾ, ಓಲಾಡುತ್ತಾ,
ಹಾಡುತ್ತಾ ಆಯಾ ತಪ್ಪಿ ಬಿದ್ದು, ಆದ ನೋವನ್ನು ಮರೆಯಲು ಔಷಧಿಗಾಗಿ
ತಿರುಗಿ ಮದಿರಾಲಯಕ್ಕೆ ಬಂದು, ವಾಸ್ತು ಪ್ರಕಾರ ಟೇಬಲ್ಲು ಹುಡುಕಿ ಕೂತು
ಟಿಪ್ಸ್ ಹಣವನ್ನ ಮೊದಲೇ ಕೊಟ್ಟು, ಉಳಿದ ಹಣ ಮುಗಿಯುವ ತನಕ
"ಒಂದು ಲಾರ್ಜ್" ಅಂತಾನಲ್ಲ ಅವನು, ಸಾಕ್ಷಾತ್ ನಿಜ ಕುಡುಕ - ಕುಡುಕ ಚಕ್ರವರ್ತಿ

ಕುಡುಕರೆಂದರೆನು ಕಡಿಮೆಯೇ ? ಉಹುಂ !!
ಕುಡುಕರಾಗಲು ಅರ್ಹತೆ ಬೇಕು, ಸ್ಥಾನಮಾನಗಳು ಬೇಕು
ಎಲ್ಲರು ಕುಡುಕರಾಗಲಾರರು,
ಅದಕ್ಕೂ ಪ್ರತಿ ಸಂಜೆ ದೀರ್ಘ ತಪಸ್ಸು ಮಾಡಬೇಕು
=====
=====

Jul 31, 2011

"Me, ಅವಳು ಮತ್ತು ನನ್ನ ಕವಿತೆ"

ಓದಿನ ಸಲುವಾಗಿ ಊರು ಬಿಟ್ಟು ಹನ್ನೊಂದು ವರ್ಷದ ಮೇಲಾಯ್ತು. ಪ್ರೈಮರಿ ಸ್ಕೂಲ್ ಕೂಡ ಬೇರೆ ಊರಲ್ಲಿ ಓದಿದ್ದು ಆದ್ರೆ ನನ್ನ ಊರಿಗೆ ಹತ್ರ ಇತ್ತು. ಇಷ್ಟು ವರ್ಷ ಊರಿಂದ ಊರಿಗೆ ಸೈಕಲ್, ಆಟೋ, ಕುದುರೆಗಾಡಿ(ಜಟಕಾಬಂಡಿ), ದೋಣಿ, ಬಸ್ಸು,ಕಾರು, ರೈಲು ಮತ್ತು ವಿಮಾನ, ಈ ಎಲ್ಲಾ ಸಂಚಾರಿ ವಾಹನಗಳಲ್ಲಿ ತಿರುಗಾಡಿದಿನಿ. ದುರಂತ ಅಂದ್ರೆ ಇಷ್ಟು ವರ್ಷಗಳ ಪ್ರಯಾಣದಲ್ಲಿ ಒಮ್ಮೆ ಕೂಡ ಅಪರಿಚಿತ, ಚಂದದ ಹುಡುಗಿ ನನ್ನ ಪಕ್ಕ ಕೂತಿಲ್ಲ ಮತ್ತು ನಾನು ಅಂಥವಳ ಪಕ್ಕ ಕೂತಿಲ್ಲ. ಚಂದದ ಹುಡುಗಿ ಅಲ್ಲ ಬರೀ ಹುಡುಗಿ ಕೂಡ ಕೂತಿಲ್ಲ. ಕಾರಣ ಗೊತ್ತಿಲ್ಲ (ನಾನು ಸ್ವಲ್ಪ ಕಪ್ಪು).

ಸುಮಾರು ತಿಂಗಳಗಳ ನಂತರ ಧಾರವಾಡಕ್ಕೆ ಹೋಗ್ತಾಯಿದ್ದೆ ಬೆಂಗಳೂರಿನಿಂದ. ಜನಶತಾಬ್ಧಿ ರೈಲಿನಲ್ಲಿ ಹುಬ್ಬಳ್ಳಿವರೆಗೆ ಹೋಗಬೇಕಾಗಿತ್ತು, ಅದರ ಟೈಮಿಂಗ್ ಬೆಳಗ್ಗೆ 6:00 am. ನನಗೆ ಸುಪ್ರಬಾತ ಕೇಳಿಸೋದು early morning 8:00 am. ನನ್ನ ಬಗ್ಗೆ ನನಗೆ ಚೆನ್ನಾಗಿ ಗೊತ್ತು ಅದಕ್ಕೆ reservation ಮಾಡ್ಸಿರ್ಲಿಲ್ಲ. ಪಾಪ, ರೈಲಿಗೆ ಅದೃಷ್ಟ ಇರ್ಲಿಲ್ವೋ ಅಥವಾ ನನ್ನ ಪಕ್ಕ ಕೂತ್ಕೋಳೊ ಹುಡುಗಿ ಇನ್ನು ರೆಡಿ ಆಗಿರ್ಲಿಲ್ವೋ ಏನೋ ಒಟ್ನಲ್ಲಿ ನಾನಂತೂ ಜನಶತಾಬ್ಧಿಗೆ ಹೋಗಲಿಲ್ಲ.

ಚಿಕ್ಕವರಿದ್ದಾಗ ದೇವರ ಮುಂದೆ ನಿಂತು ಭಕ್ತಿಯಿಂದ ನಮಸ್ಕಾರ, ಪ್ರಾರ್ಥನೆ ಇತ್ಯಾದಿ, ಇತ್ಯಾದಿಗಳನ್ನ ಮಾಡ್ಬೇಕು ಅಂತ ಮನೇಲಿ ಹೇಳೋರು ಅದನ್ನೇ ಈಗ ಕೂಡ ಮಾಡ್ತೀನಿ. ಆದ್ರೆ, ಈಗಿನ ಮಸಲತ್ತು ಬ್ಯಾರೆ. ಸಿಲಿಕಾನ್ ಸಿಟಿಯ BTM layout ನಲ್ಲಿರುವ ರೂಮು ಬಿಡುವಾಗಲೇ ದೇವರ ಮುಂದೆ ನಿಂತು ಭಕ್ತಿಯಿಂದ "ಇವತ್ತಾದರೂ ಚಂದದ ಹುಡುಗಿ ನನ್ನ ಪಕ್ಕ ಕೂತ್ಕೊಳೋ ಹಾಗೆ ಮಾಡಪ್ಪ/ ಮಾಡಮ್ಮ" ಅಂತ ಬೇಡ್ಕೊಂಡೆ.

ಬೆಂಗಳೂರು ರೈಲ್ವೆ ಸ್ಟೇಷನ್ನಿನ ಆ platform ನಲ್ಲಿ ಚಿಯಾ-ಮಿಯಾಗಳಿಂದ ಹಿಡಿದು ಇನ್ನೇನು validity ಮುಗಿಯಲಿರುವ ಎಲ್ಲಾ ವಯಸ್ಸಿನವರು 'ತ್ರಿಪುರ ಸುಂದರಿ'ಯನ್ನ ಕಾಯುವಂತೆ ಕಾಯುತ್ತಿದ್ದರು. ಆಗಾಗ, ನಿಂತವರು ಸೊಂಟದ ಮೇಲಿನ ಭಾಗವನ್ನ ಡೊಂಕಿಸಿ ನೋಡುತ್ತಿದ್ದರು, ಬೆಂಚಿನ ಮೇಲೆ ಕೂತವರು ಕೂತಲ್ಲೇ ನೋಡುವ ಪ್ರಯತ್ನ ಮಾಡುತ್ತಿದ್ದರು (ಎದ್ದರೆ ಮತ್ತೆ ಜಾಗ ಸಿಗುವ ಚಾನ್ಸ್ ಕಡಿಮೆ ಅದಕ್ಕೆ). ಒಟ್ಟಾರೆ 'Bangalore-Dharwad Intercity Express' ಎನ್ನುವ ತ್ರಿಲೋಕ ಸುಂದರಿಗಾಗಿ ಭಯಂಕರ ಕಾಯುವಿಕೆ. ಕೆಲವರು ಅದಾಗಲೇ ಪೇಪರ್, ಸಣ್ಣ ಸಣ್ಣ ಬ್ಯಾಗುಗಳನ್ನ ಕಿಡಕಿಯಿಂದ ಎಸೆದು ಸೀಟು ಪಕ್ಕ ಮಾಡ್ಕೊಬೇಕು ಅಂತ ತಯಾರಾಗಿದ್ದರು. ನಾನು ಆ ಪ್ಲ್ಯಾಟ್ಫಾರ್ಮ್ ಗೆ ಹೋಗಿ ಹದಿನೇಳು ನಿಮಿಷಗಳ ನಂತರ ಬಂದಳು ಸುಂದರಿ ಧಡಕ್-ಬಡಕ್, ಧಡಕ್-ಬಡಕ್, . . . . Intercity Express.

ಮೊದಲ ಬಾರಿ ಕಂಪಿಸಿತು ರೈಲು ::
ನಾನು ಆರಾಮಾಗಿ ಹತ್ತಿದೆ ಯಾಕಂದ್ರೆ ಸೀಟು ಸಿಗೋದು ಖಾತ್ರಿಯಿರ್ಲಿಲ್ಲ, ಅದಕ್ಯಾಕ ಗುದ್ದಾಡ್ಕೊಂಡು ಹತ್ತೋದು. ರೈಲಿನಲ್ಲೂ ಒಂದೇ ಕಡೆ ಕೂತು ಪ್ರಯಾಣ ಮಾಡೋನು ಟೆಸ್ಟ್ ಲೆಸ್ ಫೆಲೋ. ಸೀಟು ಹಿಡಿದು ಒಂದೇ ಕಡೆ ಕೂತ್ಕೊಬೇಕು ಅಂದ್ರೆ ಬಸ್ಸಿಗೆ ಹೋಗಬಹುದಲ್ವಾ ?. ಆದ್ರೂ, ಪಕ್ಕದ ಸೀಟಿನಲ್ಲಿ ಯಾರು ಕೂತ್ಕೋತಾರೆ ಅನ್ನೋ ಹುಳ ತಲೇಲಿ ಇತ್ತಲ್ಲ ಅದಕ್ಕೆ ಒಮ್ಮೆ ಕಣ್ಣಾಡಿಸಿದೆ. ಖಾಲಿ ಸೀಟು ಕಂಡಿತು, ನೋಡಿದ್ರೆ ಕಿಡಕಿ ಸೀಟಿಗೆ ಯಾರೋ ಪೇಪರ್ ಇಟ್ಟಿದ್ರು 'ಛೆ' ಅಂದುಕೊಂಡು ಅದೇ ಸೀಟಿನ ತುದಿಗೆ ಕೂತು ಎದುರುಗಡೆ ನೋಡಿದೆ. ಗುಬ್ಬಚ್ಚಿ ಕಂಡಂಗೆ ಹೆಣ್ಣು ಪ್ರಾಣಿಯೊಂದು ಕಿಡಿಕಿ ಸೀಟಿನಲ್ಲಿ ಕಂಡಿತು ಮತ್ತೆ 'ಛೆ' ಅಂದುಕೊಂಡೆ ಯಾಕಂದ್ರೆ ಅವಳ ಪಕ್ಕದಲ್ಲಿ ಯಾರೋ ಪೇಪರ್, ಬ್ಯಾಗು ಇಟ್ಟಿದ್ರು. 'ದೇವ್ರೇ ಪಕ್ಕದಲ್ಲಿ ಕೇಳಿದ್ರೆ ಎದುರುಗಡೆ ಕೊಡ್ತಿಯಲ್ಲ' ಅಂತ ನನ್ನೊಳೋಗೆ ಹೇಳಿಕೊಳ್ಳುವಾಗಲೇ ಒಬ್ಬ ಅಂಕಲ್ ಬಂದು 'ನಾನಿಲ್ಲಿ ಸೀಟು ಹಾಕಿದಿನಮ್ಮ' ಅಂದ್ರು.

That girl shifted to window side of my seat, ಅವಾಗ್ಲೇ ನನಗೆ ಗೊತ್ತಾಗಿದ್ದು ಅದು,paper, ಯಾರೋ ಸೀಟಿಗೆ ಹಾಕಿದ್ದಲ್ಲ ಮರೆತು ಬಿಟ್ಟಿರೋದು ಅಂತ. 'ಅನ್ಯಾಯವಾಗಿ ಕಿಡಕಿ ಸೀಟು miss ಆಯ್ತಲ್ಲ. ಹೋಗ್ಲಿ ಬಿಡು ಮಿಸ್ ಆದ್ರೆ ಏನಂತೆ ಚಂದದ 'ಮಿಸ್' ಗೆ ಪಾಸ್ ಆಗಿದೆಯಲ್ಲ' ಅಂದ್ಕೊಂಡೆ. ನಮ್ಮಿಬ್ಬರ ಮಧ್ಯೆ ಇನ್ನೂ ಒಬ್ಬರು ಕೂತ್ಕೊಳ್ಳುವಷ್ಟು ಜಾಗ ಖಾಲಿಯಿತ್ತು, ಈಗದನ್ನ ಮಾಯಾ ಮಾಡಬೇಕಿತ್ತು. ಯಾರಾದ್ರು ಬಂದು 'ಸ್ವಲ್ಪ ಆ ಕಡೆ ಸರೀರಿ' ಅಂತಾರೆ ಅಂತ expect ಮಾಡಿದ್ದೆ.

ಅಷ್ಟರಲ್ಲಿ ಒಂದು ಹುಡುಗ ಬಂದು 'I got it, I got it' ಅನ್ನುತ್ತಾ ಎರಡು ಪ್ಲಾಷ್ಟಿಕ್ ಕ್ಯಾರಿ ಬ್ಯಾಗುಗಳನ್ನ ಆ ಹುಡುಗಿಗೆ ತೋರಿಸಿ, ನಗುತ್ತ ನಮ್ಮಿಬ್ಬರ ನಡುವೆ ಕೂತ್ಕೊಂಡ, ಏನೋ ಸಾಧನೆ ಮಾಡಿರೋನ ತರಾ, ಕರಡಿ ನನ್ಮಗ- ಶಿವ ಪೂಜೆಯಲ್ಲಿ. I don't know what was there in those bags. ಅವರಿಬ್ಬರೂ ಕಲ್ಲಿಗೆ ಕಣ್ಣೀರು ಬರೋ ಹಾಗೆ ವಟ ವಟ ಅಂತ ಮಾತಾಡೋಕೆ ಶುರುಮಾಡಿದ್ರು, and that guy ಮಾತಿನ ನಡುನಡುವೆ ನಗ್ತಿದ್ದ, ಕಳ್ಳ. ಮಾತು ಮಾತಲ್ಲಿ ಗೊತ್ತಗಿದ್ದೆನಂದ್ರೆ she is from Dharwad and ಅವ್ರು siblings ಅಲ್ಲ. then Lovers? -ನಾನು ಅಷ್ಟು ಕೆಟ್ಟದ್ದನ್ನ ಯೋಚನೆ ಮಾಡಲ್ಲ because It hurts me, ಅಥವಾ just Friends - May be. ನನಗಂತೂ ಮೈಯಲ್ಲ ಬೆಂಕಿ, ಇವನೇ ನನ್ನ ಮೊದಲ ಶತ್ರು ಅಂತ declare ಮಾಡಿದೆ. ದೇವರನ್ನ ಅದೆಷ್ಟು ಬೈದುಕೊಂಡೆನೋ ಏನೋ, ರೈಲು ನಿಂತಲ್ಲೇ ಒಮ್ಮೆ ಕಂಪಿಸಿತು. ಆಮೇಲೆ ಹೊರಟಿತು !!

She and My Poem ::
ಆ ಹುಡುಗ ಯಶವಂತಪುರದಲ್ಲಿ ಇಳಿದ - 'ಖದೀಮ, ಇವಳನ್ನ ರೈಲು ಹತ್ಸಲಿಕ್ಕೆ ಮೆಜೆಸ್ಟಿಕ್ ತನಕ ಬಂದಿದಾನೆ. ಅದೆಷ್ಟು ರೈಲು ಹತ್ತಿಸಿದ್ನೋ ಏನೋ, ಇವ್ಳು ಎಷ್ಟು ನಂಬಿದ್ಲೋ ಏನೋ' ಅನ್ಕೊಂಡೆ. ಯಾರೋ ಬಂದ ಹಾಗಾಯ್ತು ಅವರು ಸೀಟು ಕೇಳುವ ಮೊದ್ಲೇ ನಾನೇ ಸರ್ರನೆ ಕಿಡಕಿ ಸುಂದರಿ ಕಡೆ ಜಾರಿ, ದಾನವೀರ ಶೂರ ಕರ್ಣನಾದೆ. ನನಗೆ ಎಷ್ಟೋ ವರ್ಷಗಳನ್ನ ಕೂತಲ್ಲೇ ಕಳೆದಂಗಾಗಿತ್ತು, ಈಗ ಒಂಥಾರ ನಿರಾಳ. ರೈಲು ತನ್ನ ಪಾಡಿಗೆ ತಾನು ಹೊರಟಿತ್ತು. ದೇವ್ರೇ ಕೊನೆಗೂ ಕಣ್ಣು ಬಿಟ್ಟಲ್ಲಪ್ಪ- ಹುಡುಗಿ ನನ್ನ ಪಕ್ಕ ಬಂದ್ರು, ನಾನು ಹುಡುಗಿ ಪಕ್ಕ ಹೋದರು ಒಂದೇ, ಅಲ್ವಾ?

ಈಗ ಮಾತಾಡ್ತಾಳೆ ಆಗ ಮಾತಾಡ್ತಾಳೆ ಕಾಯ್ತಾಯಿದ್ದೆ ನನ್ನ ಬ್ಯಾಗಿನಲ್ಲಿದ್ದ ಎರಡು ಪುಸ್ತಕಗಳಲ್ಲಿ ಒಂದು ಕನ್ನಡ ಕಾದಂಬರಿ ಇತ್ತು. ನಾನು ಹುಡುಗಿ ಮುಂದೆ, ಸ್ವಲ್ಪ ಬಿಲ್ಡ್ ಅಪ್ ಇರ್ಲಿ ಅಂತ ಇಂಗ್ಲೀಷ್ ಕಾದಂಬರಿ ಎತ್ಕೊಂಡೆ. ಕಾಯ್ತೀನಿ ಕಾಯ್ತೀನಿ ಉಹುಂ ಮೇಡಂ ಮಾತಾಡೋ ಯಾವ symptoms ತೋರ್ತಾಯಿಲ್ಲ. ಕಾದಂಬರಿಯ ಮೊದಲ ಪುಟ ಕೂಡ ಓದಿರಲಿಲ್ಲ, ಸುಮ್ನೆ ಪೇಜ್ ತಿರುವುತ್ತಿದ್ದೆ. ಮಾತಿನಲ್ಲಿ ನನ್ನದೋ ಭಯಂಕರ starting trouble . ಅವಳದು ಅದೇ ಪ್ರಾಬ್ಲಂ ಇರಬಹುದಾ? ಗೊತ್ತಿಲ್ಲ. ಕೆಲವು ತಾಸುಗಳು ಕಳೆದು ಹೋದವು ಆ ಹುಡುಗಿ ಸ್ವಲ್ಪ ಹೊತ್ತು ಹಾಡು ಕೇಳಿದ್ಲು, ನಂತರ ಮಲಗಿದ್ಲು ಆಗ ಅವ್ಳು ತಲೆ ಸೀಟಿನಿಂದ ಜಾರಿ ಆಸರೆ ಪಡೆಯಲಿ ಅಂತ ನನ್ನ ಭುಜವನ್ನ ಅದಕ್ಕಾಗಿ ರೆಡಿ ಮಾಡ್ಕೊಂಡೆ. ಇನ್ನೇನು ಅವ್ಳು ತಲೆ ನನ್ನ ಭುಜದ ಮೇಲೆ ಲ್ಯಾಂಡ್ ಆಗ್ಬೇಕು - ಎಚ್ಚರ ಆಗ್ಬಿಟ್ಲು. 'ಅಯ್ಯೋ ಪಾಪಿ' ಅನ್ಕೊಂಡೆ.

ಕೈಯಲ್ಲಿದ್ದ Agatha Christie ಯವರ 'Partners in Crime' ಎಂಬ ರೋಚಕ ಕಾದಂಬರಿ ಕೂಡ ಸಪ್ಪೆ ಅನಿಸಿತು ಮತ್ತೆ ಬ್ಯಾಗಿನೋಳಗಿಟ್ಟೆ. ಸ್ವಲ್ಪ ಹೊತ್ತು ಮತ್ತೆ waiting but no use. I thought train is moving so fast, ನಂತರ ಕೊನೆ ಪ್ರಯತ್ನವೆಂಬಂತೆ ಒಂದು ಕವಿತೆ ಬರೆಯಲು ರೆಡಿಯಾದೆ. ಎಲ್ಲಾದರು, ಏನಾದ್ರೂ ವಿಷಯ ಸಿಗಬಹುದು ಅಂತ ನನ್ನ ಹತ್ತಿರ ಸದಾ ಒಂದು ಪೆನ್ನು ಮತ್ತು ಖಾಲಿ ಪೇಪರ್ ಇಟ್ಕೊಂಡಿರ್ತೀನಿ (ಅದೇ ಕಾರಣಕ್ಕೆ ಈ ಬ್ಲಾಗಿನ ಹೆಸರು 'ಪೆನ್ನುಪೇಪರ್'). To be frank, i was not cheating myself - ಮನಸಿನಿಂದ ಬರೆದೆ. ಅವಳು ಅದನ್ನ ಗಮನಿಸಿದ್ಲೋ ಇಲ್ವೋ ಗೊತ್ತಾಗ್ಲಿಲ್ಲ. ಕೊನೆಗೆ ಟೈಟಲ್ ಸ್ವಲ್ಪ ದೊಡ್ಡದಾಗಿ ಬರೆದೆ 'Saying I Love U' ಅಂತ. ಅವಳು ಗಮನಿಸಲಿ ಅಂತ I Love U ಅನ್ನೋದರ ಕೆಳಗೆ ಎರಡು ಸಲ underline ಮಾಡ್ದೆ. and Finally, NO USE.

ME and My Poem ::
ಆಮೇಲೆ ಅಲ್ಲೇ ಸುತ್ತ-ಮುತ್ತಾ ಎರಡು-ಮೂರು ಸಲ ಸೀಟು ಬದಲಾಯಿಸಿದೆ. ಈವರೆಗಿನ ನನ್ನ ರೈಲು ಪ್ರಯಾಣದಲ್ಲಿ ನಾನು ತುಂಬಾ ಹೊತ್ತು ಕೂತಲ್ಲೇ ಕೂತಿದ್ದು ಅದೇ ಮೊದಲು - only because of that girl. ಬೆಂಗಳೂರಿನಿಂದ ಧಾರವಾಡಕ್ಕೆ Intercity train ನಲ್ಲಿ ಹೋದ್ರೆ ಒಂಬತ್ತು ತಾಸು ಬೇಕಾಗುತ್ತೆ. ಆ ಒಂಬತ್ತು ತಾಸಿನಲ್ಲಿ ಸುಮಾರು ಐದು ತಾಸು ನಾನು ಅವಳ ಜೊತೆಯಲ್ಲೇ ಇದ್ದೆ (ನಡುನಡುವೆ ಸುತ್ತಾದೊದನ್ನ ಬಿಟ್ಟು). ಹುಬ್ಬಳ್ಳಿ ಬಂತು ಎಲ್ಲರು ಇಳಿದು ಹೋದರು.

ನಾನಿದ್ದ ಡಬ್ಬಿಯಲ್ಲಿ ಇದ್ದಿದ್ದು ನಾನು, ಅವಳು ಮತ್ತು ನಾನು ಅವಳಿಗೆಂದೇ ಬರೆದ ಕವಿತೆ. ನಾವಿದ್ದ ಡಬ್ಬಿಯ ಎರಡು ಕಡೆ ಡಬ್ಬಿಗಳಲ್ಲಿ ಯಾರು ಇಲ್ಲ, ಹುಬ್ಬಳ್ಳಿಯ ಸ್ಟೇಷನ್ನಿನಲ್ಲಿ ಮಸ್ತ್ ಮೌನ, ಹತ್ತು ಗಂಟೆಯತ್ತ ಸಾಗುತ್ತಿತ್ತು, ರಾತ್ರಿ. ಧಾರವಾಡಕ್ಕೆ ಹೋಗೋರು ಬಹುಶಃ ಇಡೀ ರೈಲಿನಲ್ಲಿ ಹೆಚ್ಚು ಅಂದ್ರೆ 40-50 ಜನ ಮಾತ್ರ. ಈ ಎಲ್ಲಾ ಕಾರಣಗಳಿಗೆ ಆ ಹುಡುಗಿಗೆ ಹೆದರಿಕೆಯಾಯ್ತು ಅನ್ಸುತ್ತೆ. ಮೆಲ್ಲಗೆ ಎದ್ದು 'ನೀವೂ ಧಾರವಾಡಕ್ಕೆನ್ರಿ' ಅಂದಳು ಮೌನ ಸುಂದರಿ. ಹುಡುಗಿಯರಿಗೆ ಯಾವಾಗ ಹೆದ್ರಕೆಯಾಗೊತ್ತೋ, ಯಾವಾಗ ತಮ್ಮ ಕೈಯಲ್ಲಿ ಕೆಲಸ ಆಗಲ್ಲ ಅಂತ ಗೊತ್ತಾಗುತ್ತೋ ಆಗಷ್ಟೇ ಹುಡುಗುರು ನೆನಪಾಗ್ತಾರೆ. ಅಲ್ವಾ ?. ನನಗೂ ಸಿಟ್ಟು ಬಂದಿತ್ತು ಆ ಹುಡುಗಿ ಮೇಲೆ because i was disappointed . ಅದಕ್ಕೆ ' ಇಲ್ಲ ವಾಪಾಸ್ ಬೆಂಗಳೂರಿಗೆ ಹೋಗಾಂವ ಅದೀನಿ' ಅಂತ ಅನ್ಬೇಕು ಅನ್ಸಿತ್ತು ಆದ್ರೂ ತಡ್ಕೊಂಡು 'ಹೌದು' ಅಂದೆ. ಎಷ್ಟೇ ಆಗ್ಲಿ ಗಂಡು ಜೀವ ಹೆಣ್ಣಿಗೆ ಕರಗುತ್ತೆ.

ನಾನು ರೈಲಿಳಿದು ಪ್ಲ್ಯಾಟ್ಫಾರ್ಮ್ ನಲ್ಲಿ ಸುತ್ತಾಡಿದೆ. ಆ ಹುಡುಗಿಗೆ ನನ್ನಿಂದಲೂ ಅಭಯ ಸಿಗಲಿಲ್ಲ ಅನ್ಸುತ್ತೆ ತನ್ನ ಲಗೇಜ್ ತೊಗೊಂಡು ಬೇರೆ ಡಬ್ಬಿಗೆ ಹೊರಟಳು - Yes, She moved away and ironically she was no time with me. ರೈಲು ಧಾರವಾಡಕ್ಕೆ ಹೊರಟಿತು - InterCity now more beauty for none unless it start again to Bangalore. ಉಳಿದದ್ದು ನಾನು ಮತ್ತು ಕವಿತೆ there and only there.

Destination ::
ಸ್ವಲ್ಪ ಹೊತ್ತು ಕೂತೆ, ನಾನಿದ್ದ ಡಬ್ಬಿ ಕೊನೆಯಿಂದ ಮೂರನೆಯದಾಗಿತ್ತು. ರೈಲ್ವೆ ಕಾರ್ಮಿಕರು ಹುಬ್ಬಳ್ಳಿಯಿಂದ ಕ್ಲೀನ್ ಮಾಡೋಕೆ ಶುರು ಮಾಡಿದ್ರು, ಧೂಳು ಅಡರುತ್ತಿತ್ತು. ಬ್ಯಾಗನ್ನು ಹೆಗಲಿಗೇರಿಸಿಕೊಂಡು ಒಂದೊಂದೇ ಡಬ್ಬಿಗಳನ್ನ ದಾಟಿದೆ. ಅಲ್ಲಿ ನಾಲ್ಕೈದು ಜನರಲ್ಲಿ ಆ ಹುಡುಗಿಯು ಇದ್ದಿದ್ದು ಗೊತ್ತಾಯ್ತು ಆದ್ರೆ ಹತ್ರ ಹೋದಾಗ ಅವಳ ಕಡೆ ನೋಡಲಿಲ್ಲ. ಧಾರವಾಡದಲ್ಲಿ ಮನೆಗೆ ಹೋದಾಗ ರಾತ್ರಿ ಹೊನ್ನೊಂದು ಹತ್ತಿರವಾಗಿತ್ತು. 'ಚೆನ್ನಾಗಿತ್ತಾ ಪ್ರಯಾಣ ?' ಮನೆಯಲ್ಲಿ ಸಾಮಾನ್ಯ ಪ್ರಶ್ನೆ.
'It was beautiful' ಹಾಗಂತ ಹೇಳ್ಬೇಕು ಇಲ್ಲಾಂದ್ರೆ ಸುಮ್ನೆ ಪ್ರಶ್ನೆ, ಗಾಬರಿ ಶುರುವಾಗ್ತವೆ.

ಮುಗಿಯಿತು :
ಮರುದಿನ ಬಟ್ಟೆ ತೊಳೆಯೋಕೆ ಹಾಕುವಾಗ ತಂಗಿ, ಶರ್ಟ್ ನಲ್ಲಿದ್ದ ಹಾಳೆ ನೋಡಿ ಏನೋ ಕವನ ಬರ್ದಿರ್ತಾನೆ ಅಂತ ಓದಿದಾಳೆ.
ನನ್ನಿಂದ ವಿರಚಿತ ಕವಿತೆ ತೋರಿಸಿ 'ಯಾರಿಗೋ ಪ್ರಪೋಸ್ ಮಾಡಿರೋ ಹಾಗಿದೆ' ಅಂದ್ಲು.
'yep, But no use' ಅಂದೆ
she said 'I think , You don't know how to approach'
'May be, I have not attended any classes of it' we both laughed.
'ಹೆಂಗಿದ್ಲು ?' she asked
"Beautiful" ಅನ್ನುತ್ತಾ ಬೈಕಿನ ಕಿಕ್ ಅನ್ನು ಜೋರಾಗಿಯೇ ಒದ್ದೆ.
who knows ? same 'window beauty' may ask me a lift now . hoping for the best.
=====
=====

Jul 10, 2011

"ಗಂಗೂ : ರೆಡ್ ಲೈಟ್ ನಲ್ಲಿ"

ಕಾತೆವಾಡದ ರಾಜ ಮನೆತನಕ್ಕೆ ತೀರಾ ಹತ್ತಿರದ, ತುಂಬಾ ಅನುಕೂಲಸ್ತ ಕುಟುಂಬದ ಹುಡುಗಿ ಅವಳು - ಗಂಗಾ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅಷ್ಟಾಗಿ ಒತ್ತು ಕೊಡದ ಆ ಕಾಲದಲ್ಲಿ ಆಕೆ ಸ್ಕೂಲ್ ಗೆ ಹೋಗ್ತಾಯಿದ್ಲು. ಅವಳಿಗೆ ಆಸೆಯಿತ್ತು - ಸಿನಿಮಾ ನಟಿಯಾಗಬೇಕು ಅಂತ. ಒಮ್ಮೆ ಆಕೆಯ ಕ್ಲಾಸ್ ಮೇಟ್ ಮುಂಬೈ ನೋಡಿ ಬಂದವರು, ಮುಂಬೈ ಹಾಗಿದೆ ಗೊತ್ತಾ? ಹೀಗಿದೆ ಗೊತ್ತಾ? ಆಹಾ ಎಷ್ಟು ದೊಡ್ಡ ಕತ್ತದಗಲಿದಾವೆ ಗೊತ್ತಾ? ಅಂತೆಲ್ಲ ಮಾತಾಡಿದ್ರು. ಗಂಗಾಗೆ ತಾನು ಮುಂಬೈ ನೋಡಬೇಕು ಆನೋ ಆಸೆ ಹುಟ್ಟಿತು. ಸಿನಿಮಾ ನಟಿಯಾಗೊದಂತು ದೂರದ ಮಾತು ಅಂತ ಅವಳಿಗೆ ಗೊತ್ತಿತ್ತು ಯಾಕಂದ್ರೆ ಕೌಟುಂಬಿಕ ಹಿನ್ನಲೆ ಹಾಗಿತ್ತು / ದೊಡ್ಡದಿತ್ತು. ಆಗಲೇ ಗಂಗಾನ ತಂದೆ ರಮಣಿಕ್ ಹೆಸರಿನ ಹುಡುಗನನ್ನ ಕೆಲಸಕ್ಕೆ ನೆಮಿಸಿಕೊಳ್ಳುತ್ತಾರೆ, ಅವನು ಮುಂಬೈ ನೋಡಿದವನು ಅಂತ ಗೊತ್ತಾದ ಮೇಲೆ ಗಂಗಾ ಅವನಿಗೆ ಹತ್ರ ಆಗ್ತಾಳೆ. ಆತ ತನಗೆ ಸಿನಿಮಾಕ್ಕೆ ಹತ್ತಿರವಿರುವ ಸ್ನೇಹಿತರಿದ್ದಾರೆ ಅಂತ ಹೇಳ್ತಾನೆ - ಗಂಗಾ ನಂಬಿ ಬಿಡ್ತಾಳೆ.

ಇಬ್ಬರ ನಡುವೆ ಪ್ರೀತಿ ಬೆಳೆಯುತ್ತೆ. ಒಂದು ದಿನ ಒಡವೆ,ಹಣವನ್ನ ಕಟ್ಟಿಕೊಂಡು ಗಂಗಾ ರಮಣಿಕ್ ನೊಂದಿಗೆ ಮುಂಬೈಗೆ ಬರ್ತಾಳೆ. ಮನೆಯವರಿಗೆ ಒಂದೇ ಒಂದು ಚೀಟಿಯನ್ನು ಸಹ ಬರೆದಿಟ್ಟಿರಲ್ಲ.
ಅವಳು ತಂದ ಹಣದಲ್ಲಿ ಇಬ್ಬರು ಲಾಡ್ಜಿನಲ್ಲಿ ಉಳಿತಾರೆ, ಸಿಟಿ ಸುತ್ತಾಡ್ತಾರೆ, ದೈಹಿಕವಾಗಿ ಒಂದಾಗ್ತಾರೆ - ರಮಣಿಕ್ ಜೊತೆಯಾಗಿ ಸಂಸಾರ ಮಾಡೋಣ ಅಂತ ಹೇಳಿರ್ತಾನೆ. ಇನ್ನೇನು ಹಣವೆಲ್ಲ ಖಾಲಿಯಾಗ್ತಾಯಿದೆ ಅನ್ನುವಾಗ ಅವನು ಮನೆ ನೋಡ್ತೀನಿ ಅಲ್ಲಿಯವರೆಗೂ ನನ್ನ ಆಂಟಿ ಮನೆಲಿರು ಅಂತ ಹೇಳಿ ಗಂಗಾಳನ್ನ ತನ್ನ ಆಂಟಿ ಜೊತೆ ಕಳಿಸಿ. ಮನೆ ಹುಡುಕಲಿಕ್ಕೆ ಅಂತ ಹೋಗ್ತಾನೆ.


ರಮಣಿಕ್ ನ ಆಂಟಿ ಜೊತೆ ಟ್ಯಾಕ್ಸಿಯಲ್ಲಿ ಬಂದು ಗಂಗಾ ಇಳಿಯೋದು - ಮುಂಬೈ ನಗರಿಯ 'ಕಾಮಾಟಿಪುರ', ರೆಡ್ ಲೈಟ್ ಏರಿಯ!! ಗಂಗಾಗೆ ಆ ಜಾಗ ಎಂತದು ಅಂತ ಗೊತ್ತಿರಲ್ಲ. ಆದರೂ ಯಾಕೋ ಏನೋ ಸರಿಯಿಲ್ಲ ಅನಿಸುತ್ತೆ.
ಹೇಗೋ, ಇವತ್ತು ಒಂದು ದಿನ ತಾನೇ. ನಾಳೆ ನಾನು ರಮಣಿಕ್ ನ ಜೊತೆ ಹೊಸ ಮನೆಗೆ ಹೋಗ್ತೀನಿ ಅಂತ ಅನ್ಕೊತಾಳೆ, ಆದರೆ ಆಂಟಿ ಹೇಳಿದ್ದು ಕೇಳಿ ಗಂಗಾಗೆ ದಂಗುಬಡಿಯುತ್ತೆ - ರಮಣಿಕ್ ಗಂಗಾಳನ್ನ ಮಾರಾಟ ಮಾಡಿ ಹೋಗಿಬಿಟ್ಟಿರುತ್ತಾನೆ. ಇನ್ನು ಆಂಟಿ, ಆಕೆ ಆಂಟಿಯಲ್ಲ - ಘರ್ ವಾಲಿ.

ಗಂಗಾ ಜಗಳ ಮಾಡ್ತಾಳೆ, ಕಿರಿಚಾಡ್ತಾಳೆ ಅವಳಿಗೆ ಒದೆಗಳು ಬೀಳ್ತವೆ ಮತ್ತೆ ಅಳ್ತಾಳೆ. ಕೊನೆಗೆ ಎಲ್ಲಾ ರೀತಿಯಲ್ಲಿ ಯೋಚಿಸಿ ತಾನು ವೇಶ್ಯೆಯಾಗಲಿಕ್ಕೆ ತಯಾರು ಅಂತಾಳೆ - ಕಾತೆವಾಡದ ತುಂಬಾ ಅನುಕೂಲಸ್ತ ಮನೆಯ ಹುಡುಗಿ.
ಮಾರಾಟಮಾಡಿದ ರಮಣಿಕ್ ಒಂದು ವಾರ ಗಂಗಾಳನ್ನ ದೈಹಿಕಾವಾಗಿ ಉಪಯೋಗಿಸಿಕೊಂಡು, ಗಂಗಾ ಇನ್ನು ಕನ್ಯೆ ಅಂತ ಹೇಳಿ ಮಾರಾಟ ಮಾಡಿರ್ತಾನೆ. ತಾನು ಕನ್ಯೆ ಅಲ್ಲ ಅಂತ ಗಂಗಾ ಕೂಡ ಘರ್ ವಾಲಿಗೆ ಹೇಳೋದಿಲ್ಲ. ಅವಳ ಜೊತೆ ಕಾಮಾಟಿಪುರದಲ್ಲಿ ಮಲಗಿದ ಮೊದಲ ಗಂಡಸಿಗೆ ಆಕೆ ಇಷ್ಟ ಆಗ್ತಾಳೆ. ಆ ಗಂಡಸು ಎಲ್ಲಾ ಮುಗಿದ ಮೇಲೆ ನಿನ್ನ ಹೆಸರೇನು ಅಂತ ಕೇಳ್ತಾನೆ. ಸ್ವಲ್ಪ ಸುಮ್ಮನಿದ್ದು ಗಂಗಾ, 'ಗಂಗೂ' ಅಂತಾಳೆ - ಬರ್ತ್ ಆಫ್ ಪ್ರೋಷ್ಟಿಟ್ಯುಟ್. ನಂತರ ಅವಳನ್ನೇ ಹುಡುಕಿಕೊಂಡು ಎಷ್ಟೋ ಜನ ಬರೋಕ್ಕೆ ಶುರುಮಾಡ್ತಾರೆ.

ಗಂಗೂ ತನ್ನ ಬುದ್ಧಿವಂತೆಕೆಯಿಂದ, ಪ್ಲ್ಯಾನ್ ಗಳಿಂದ ಬೆಳೆದ ರೀತಿ ಅಮೇಜಿಂಗ್ ಅನ್ಸಿಬಿಡುತ್ತೆ. ಮುಂದೆ ಆಕೆ ಇಡೀ ಕಾಮಾಟಿಪುರವನ್ನ ರಾಣಿಯಂತೆ ಆಳುತ್ತಾಳೆ. ಅದೆಷ್ಟೋ ಕಷ್ಟಗಳಿಂದ ವೇಶ್ಯೆಯರನ್ನ ಕಾಪಾಡ್ತಾಳೆ. ಎಲ್ಲರು ಆಕೆಗೆ 'ಅಮ್ಮ' ಅಂತಾರೆ. ವೇಶ್ಯೆಯರು ಸಮಾಜಕ್ಕೆ ಎಷ್ಟರಮಟ್ಟಿಗೆ ಅವಶ್ಯಕ ಅಂತ ಆಕೆ ಮಾಡಿದ ಭಾಷಣ ಸಭೆಯಲ್ಲಿ ನೆರೆದಿದ್ದ ರಾಜಕಾರಣಿಗಳಿಗೆ, ಸಮಾಜ ಸೇವಕರಿಗೆ, ದೊಡ್ಡ ದೊಡ್ಡ ಹುದ್ದೆಯಲ್ಲಿರುವವರಿಗೆ ಸಿಡಿಲು ಬಡಿದಂತಾಗಿತ್ತು.


ಗಂಗೂಬಾಯಿ ಸೀರೆಯ
ಅಂಚಿಗೆ ಬಂಗಾರದ ಪಟ್ಟಿಯಿರ್ತಾಯಿತ್ತು, ಬ್ಲೌಸಿಗೆ ಬಂಗಾರದ ಗುಂಡಿಗಳು. ಆ ಕಾಲದಲ್ಲಿ ಆಕೆಯ ಹತ್ತಿರ ಇದ್ದಿದ್ದು 'ಬೆಂತ್ಲಿ' ಕಾರಿತ್ತು. ಭಯಂಕರ ಆಸ್ತಿ. ಈಗಲೂ ಕಾಮಾಟಿಪುರದ ಎಷ್ಟೋ ಮನೆಗಳಲ್ಲಿ ಆಕೆಯನ್ನ ಪೂಜಿಸ್ತಾರೆ, ಆಕೆದೊಂದು ಫೋಟೋ ಇಟ್ಟಿರ್ತಾರೆ. ಅಲ್ಲಿಯೇ ಆಕೆದೊಂದು ಮೂರ್ತಿಯಿದೆ.

೧೯೬೦ ರಲ್ಲಿ ಒಬ್ಬ ವೇಶ್ಯೆಯಾಗಿ / ಕಾಮಾಟಿಪುರದ ಲೀಡರ್ ಆಗಿ ಭಾರತದ ಪ್ರದಾನ ಮಂತ್ರಿ ನೆಹರು ಜೊತೆ ಆಕೆ ಮೀಟಿಂಗ್ ಮಾಡಿದ್ದಳು ಅಂದ್ರೆ ನೀವು ನಂಬ್ತೀರಾ ? ನಂಬಲೇ ಬೇಕು!!

"ಯಾಕಮ್ಮ ನೀನು ವೆಶ್ಯೇಯಾದೆ ? ಒಂದು ಒಳ್ಳೆ ಕೆಲ್ಸಾ ಮಾಡೋದಲ್ವ ? ಒಳ್ಳೆ ಗಂಡನ ಜೊತೆ ಇರಬಹುದಲ್ವಾ ?" ಅಂತ ನೆಹರು ಕೇಳಿದ್ರೆ.
"ನೀವು ನನ್ನ ಶ್ರೀಮತಿ. ನೆಹರು ಅಂತ ಮಾಡಿಕೊಳ್ಳೋದಾದ್ರೆ, ನಾನು ಈಗಿನ ಕೆಲಸ ಬಿಡ್ತೀನಿ" ಅಂದಳು ಗಂಗೂಬಾಯಿ, ನೆಹರು ಕಕ್ಕಾಬಿಕ್ಕಿ.

ನೂರಾರು ಜನ ವೇಶ್ಯೆಯರನ್ನ ಮತ್ತು ರಾಜಕಾರಣಿಗಳನ್ನ, ಗೂಂಡಾಗಳನ್ನ, ಮಾದ್ಯಮದವರನ್ನ ಆಕೆ ಹ್ಯಾಂಡಲ್ ಮಾಡ್ತಿದ್ದಳು ಅಂದ್ರೆ ಅದೇನ್ ತಮಾಷೆ ಮಾತಾ?

ಮಹಾನಗರಿ ಮುಂಬೈ ಕ್ರೂರಪ್ರಪಂಚ/ ಅಂಡರ್ ವಲ್ಡ್ ನ ಇನ್ನು ಅನೇಕ ರಾಣಿಯರ ಬಗ್ಗೆ ನಿಮಗೆ ಓದಬೇಕು ಅನಿಸಿದರೆ.
ಎಸ್. ಹುಸೇನ್ ಜೈದಿ ಬರೆದಿರುವ "ಮಾಫಿಯ ಕ್ವೀನ್ಸ್ ಆಫ್ ಮುಂಬೈ" ಪುಸ್ತಕವನ್ನ ನೀವು ಓದಬೇಕು.
ಓದಿದ ಮೇಲೆ ಖಂಡಿತವಾಗಿಯೂ ಬೇರೆಯದೊಂದು ಪ್ರಪಂಚ ನಿಮಗೆ ಕಾಣುತ್ತೆ. ನೀವು ಓದ್ತೀರಾ ನನಗೊತ್ತು.

=====
=====

Jun 21, 2011

"ಇದು ಸೈಡ್ ಸ್ಟೋರಿ"


. 'ಇದು ನಾಯಿ ಪ್ರೀತಿ'

ನಿನ್ನ ಕೇಶರಾಶಿ ನೋಡಲು ರೋಮಾಂಚನ
ನೀ ನನ್ನತ್ತ ಬರಲು ನನ್ನೊಳಗೆ ಮಧುರ ಕಂಪನ
ಆದರೂ ಸಹಿಸಲಾರೆ ನಿನ್ನೀ ಎಂಜಲಿನ ತುಂತುರು ಸಿಂಚನ
ನನ್ನ ಮುದ್ದು ನಾಯಿಮರಿಯೇ ತಪ್ಪು ತಿಳಿಯಬೇಡ ನನ್ನ

. 'ಇದುವೇ ಸದ್ಮಾ'

ಮೊದ್ಲು, ಅವಳು ನನ್ನ ನೋಡಿ 'ಕಿಸ ಕಿಸ ಕಿಸಕ್' ಅಂತ ನಗ್ತಿದ್ಲು
ಆಗೆಲ್ಲ ನನ್ನ ಕಣ್ಣಿಗೆ ಫುಲ್ ಬೆಳದಿಂಗಳು

ಒಮ್ಮೆ ಫೋನ್ ಮಾಡಿ ಕರೆದಳು
ನಾ ಹೋಗ್ದೆಯಿರ್ತಿನಾ ?

ಲಗ್ನಪತ್ರ ಕೈಗಿಟ್ಟು ಮತ್ತೆ 'ಕಿಸಿ ಕಿಸಿ ಕಿಸಕ್' ಅಂತ ನಕ್ಕಳು
ನನ್ನ ಕಣ್ಣ ಮುಂದೆ ಅಮಾವಾಸ್ಯೆ ಕತ್ಲು

ಹೇಳ್ದೆ ಕೇಳ್ದೆ ಶೋಕಗೀತೆಯ ಕೋರಸ್ ಶುರುವಾತು :
'
ಇದು ಸದ್ಮಾ . . . ಇದುವೇ ಸದ್ಮಾ,
ನಿನಗ್ಯಾಕ ಬೇಕಾಗಿತ್ತು ಉಸಾಬರಿ ತಮ್ಮಾ . . . '

. 'ಶೀಟ್ ಮ್ಯಾನ್'

ಬೆಳಗಾದ ಮೇಲೂ ಅವಳು,
ರಾತ್ರಿ ಕೊಟ್ಟ ಮುತ್ತಿನ ಗಮ್ಮತ್ತು ಇನ್ನೂ ಇತ್ತು-ಇಸ್ ಇಟ್ ? ಅಬ್ಬೋ

ಹಾಲು ಕರಿಯಲು,
ಕೊಟ್ಟಿಗೆಯತ್ತ ಹೋದೆ ತೂರಾಡುತ ಅಮಲಿನಲ್ಲಿ, ಮುತ್ತಿನ ಅಮಲಿನಲ್ಲಿ
ಲಿಪ್ಪಿಸ್ಟಿಕ್ಕಿನ ಕೆಂಪು ತುಟಿಗಳ ಗುರುತು ಇನ್ನೂ ಇತ್ತು - ಆಹಾ ಕಳ್ಳ, ಬರೀ ಮುತ್ತಿಗೆ ಟೈಟಾದ್ರೆ ಹೆಂಗೆ ?

ನೀರು ಚಿಮುಕಿಸಿ ಹಸುವಿನ ಕೆಚ್ಚಲಿಗೆ ಕೈಹಾಕುವ ಮುನ್ನವೂ,
ನನ್ನಲ್ಲಿ ಮುತ್ತಿನ ಮತ್ತೇ ಇತ್ತು - ಇದ್ಯಾಕೋ ಸ್ವಲ್ಪ ಜಾಸ್ತಿಯಾಯ್ತು.
ಕೆಚ್ಚಲಿಗೆ ಕೈಹಾಕಿದ ಕ್ಷಣಾರ್ಧದಲ್ಲಿ ಕಂಡವು ನಕ್ಷತ್ರ - ಬೆಳಗ್ಗೆ ನಕ್ಷತ್ರಗಳಾ? ಏನಾಯ್ತು?

ಕೆಚ್ಚಲಿಗೆ ಕೈಹಾಕಿದವನಿಗೆ ಹಾಲು ಸಿಗಲಿಲ್ಲ, ಅಸಲಿಗೆ ಕೆಚ್ಚಲಿದ್ದರೆ ತಾನೇ !!
ಮುತ್ತಿನ ಗುಂಗಿನಲ್ಲಿ ನಾನು ಅದರ ಲಿಂಗ ಭೇದ ಮಾಡಿದನಲ್ಲನೆಂಬ ಸಿಟ್ಟಿನಲ್ಲಿ ಝಾಡಿಸಿ ಒದ್ದುಬಿಟ್ಟಿತಲ್ಲ 'ಎತ್ತು' - ಶೀಟ್ ಮ್ಯಾನ್

=====
=====

May 21, 2011

"ನಾನೂ ಒಂದು ಪದ . . . . "

ಏಕಾಂತದಲ್ಲಿ ಅವಳ ಮುಂದೆ ಹಾಡಬೇಕೆಂದು

ಹೂವು, ಚಂದ್ರ, ಮಳೆ, ತಂಗಾಳಿ - ಎಲ್ಲವನ್ನ ಪೋಣಿಸಿ
ಇಷ್ಟಪಟ್ಟು, ಪ್ರೀತಿಯಿಂದ ಒಂದು ಪದ ಕಟ್ಟಿದ್ದೆ.

ಆಗ,

ಹಾಡಲು ಒಂದೇ ಒಂದು ಅವಕಾಶ ಕೊಡಲಿಲ್ಲ; ಆಕೆ.
ನಾನು ಪ್ರಯತ್ನಿಸಿದೆನಾದರು, ನಾನೂ ಸುಮ್ಮನಾಗಿಬಿಟ್ಟೆ

ಕಾಲಪಲ್ಲಟಕ್ಕೆ ಯಾರ ಹಂಗು - ನನ್ನದಾ ? ಅವಳದಾ?

ಚಲಿಸುತ್ತಲೇ ಬಂತು, ನಿಲ್ಲಿಸಲು ನಾನು ಪ್ರಯತ್ನಿಸಲಿಲ್ಲ

**

ಅನಿರೀಕ್ಷಿತವಾಗಿ ಎದುರಿಗೆ ಬಂದು ನಿಂತಿದ್ದಾಳೆ,
ಅವಳಲ್ಲಿ ನಿಶ್ಯಬ್ದಕ್ಕಿಂತ ಮೆಲು ಮಾತು - ಮತ್ತೇನು ಉಳಿದಿಲ್ಲ

ಈಗ,

ಕಷ್ಟಪಟ್ಟರೂ, ಯಾಕೋ ಒಂದು ಸಾಲು ನೆನಪಾಗುತ್ತಿಲ್ಲ,
ಮರೆತ ಮಾತನ್ನ ಕೆದಕುವ ಪುರಸೊತ್ತು ನನಗಿಲ್ಲ.
ನಿಜ - ನಾನು ಒಮ್ಮೆ ಪದ ಕಟ್ಟಿದ್ದೆ.

=====

=====

May 2, 2011

"ಕಾವ್ಯ , ಅಮೃತ ಮತ್ತು ಗರುಡ"


ಯಾವುದೇ ಆದರೂ, ಅದನ್ನ ನೋಡುವಾಗ ನೋಡುಗನ ಮನಸ್ಥಿತಿ ಮತ್ತು ಅನುಭವ ಪ್ರಮುಖ ಪಾತ್ರ ವಹಿಸುತ್ತವೆ. ಒಂದು ಹುಡುಗಿಯನ್ನ ಬೇರೆ ಬೇರೆ ಹುಡುಗರು ಬೇರೆ ಬೇರೆ ಆದ ರೀತಿಯಲ್ಲಿ ವರ್ಣಿಸುತ್ತಾರೆ - ಅದೆಷ್ಟು ಸತ್ಯ, ಸುಳ್ಳು; ಮಾತು ಬ್ಯಾರೆ.

ಒಂದೇ ವಸ್ತುವಿನ ಬಗ್ಗೆ ಬೇರೆ ಬೇರೆ ಕವಿಗಳು, ಸಾಹಿತಿಗಳು ಬೇರೆ ಬೇರೆಯದೆ ರೀತಿಯಲ್ಲಿ ಬರೆಯುತ್ತಾರೆ. ಅವುಗಳಲ್ಲಿ ಯಾರದು ಎಷ್ಟು ನಿಜ ಅನ್ನುವುದಕ್ಕಿಂತ - ಅದು ಅವರು ಕಂಡುಕೊಂಡ ಸತ್ಯ ಅಷ್ಟೇ. ಓದಿದ ಮೇಲೆ ಯಾವುದು ನಮ್ಮಲ್ಲಿ ಹರಳುಗಟ್ಟಿ ನಿಲ್ಲುತ್ತದೆಯೋ ಅದು ನಮಗೆ ಹತ್ತಿರವಾದ ಸತ್ಯ. ಕನ್ನಡದಲ್ಲಿ 'ಕವಿತೆ' ಅನ್ನೋ ಪದ 'ಬೇಂದ್ರೆ' ಅನ್ನೋ ಹೆಸರನ್ನ ಥಟ್ಟಂತ ಸೂಚಿಸಿಹೊಗುವಷ್ಟರಮಟ್ಟಿಗೆ ಬೇಂದ್ರೆ ಅವರ ಬರಹ, ಬದುಕು ಎರಡು ದೊಡ್ಡವು.

ಶ್ರೀಕೃಷ್ಣ ಆಲನಹಳ್ಳಿ, ಕನ್ನಡದ ಮತ್ತೊಬ್ಬ ಪ್ರತಿಬಾವಂತ ಬರಹಗಾರ. ಆತ ಬದುಕನ್ನ ತುಂಬಾ ತೀವ್ರವಾಗಿ ಬದುಕಿದ ಅಂತಾರೆ. ಅವರ ಎಲ್ಲ ಪುಸ್ತಕಗಳೂ ಮಲಯಾಳಂ ಭಾಷೆಗೆ ಅನುವಾದಗೊಂಡಿವೆ - ಕೇರಳದವರು ಸುಲಭವಾಗಿ ಬೇರೆ ಭಾಷೆಯವರನ್ನ ಒಪ್ಪಲ್ಲ. ಶ್ರೀಕೃಷ್ಣ ಅವರು ಹಟಕ್ಕೆ ಬಿದ್ದು ಬರೀತಾಯಿದ್ರಂತೆ. ಆತ ಹತ್ತಿರವಾಗಿದ್ದು ತನ್ನ ಕೃತಿಗಳಲ್ಲಿ ಬಾಲ್ಯವನ್ನ ಕಟ್ಟಿಕೊಟ್ಟ ರೀತಿಯಿಂದ - ಆತನ ಶೈಲಿಯೇ ಬೇರೆ. ರಾಜಕಿಯವಾಗಿಯು ತಕ್ಕಮಟ್ಟಿಗೆ ತಮ್ಮನ್ನು ತೊಡಗಿಕೊಂಡಿದ್ದ ಶ್ರೀಕೃಷ್ಣ ಆಲನಹಳ್ಳಿಯವರ ಅಕಾಲಿಕ ಮರಣ ಕನ್ನಡ ಸಾಹಿತ್ಯ ವಲಯದಲ್ಲಿ ನಷ್ಟವೇ ಸರಿ.

ಹಿರಿಯ ಕವಿಗಳಾದ ಎಚ್ ಎಸ್ ವೆಂಕಟೇಶ್ ಮೂರ್ತಿಯವರು ಹೇಳುವಂತೆ 'ಪ್ರಾಚೀನ ಸಾಹಿತ್ಯದಿಂದ ಇಂದಿನವರೆಗೂ ಕವಿತೆಗಳಿಗೆ ಸ್ಪಂದನೆ ಕಡಿಮೆಯೇ'. ಕಾರಣ, ಕವಿತೆ ಆಳಕ್ಕಿಳಿದರೆ ಮಾತ್ರ ತನ್ನನ್ನ ತೆರೆದುಕೊಳ್ಳುತ್ತೆ, ಪರಿಮಳವನ್ನ ಸೂಸುತ್ತೆ. 'ಸತ್ಯವನ್ನ ಸಮರ್ಪಕವಾಗಿ ಸೆರೆಹಿಡಿಯುವ ಒಂದೇ ಒಂದು ಸಾಹಿತ್ಯ ಪ್ರಕಾರ ಅಂದ್ರೆ ಅದು ಕವಿತೆ' ಹಾಗಂತ ಖ್ಯಾತ ವಿಮರ್ಶಕರಾದ ಡಿ ಆರ್ ನಾಗರಾಜ್ ಅವರು ತಮ್ಮ 'ಅಮೃತ ಮತ್ತು ಗರುಡ' ಪುಸ್ತಕದಲ್ಲಿ ಬರೀತಾರೆ.

'ಕಾವ್ಯವೆನ್ನುವುದು ಅಮೃತಕ್ಕೆ ಹಾರುವ ಗರುಡ' - ಬೇಂದ್ರೆಯವರ ಈ ಸಾಲನ್ನೇ, 'ಅಮೃತ ಮತ್ತು ಗರುಡ' ಅಂತ ನಾಗರಾಜ್ ಅವರು ತಮ್ಮ ಪುಸ್ತಕಕ್ಕೆ ಹೆಸರಾಗಿ ಬಳಸಿಕೊಂಡರು. ಈ ಕಾವ್ಯಕ್ಕೂ, ಗರುಡನಿಗು ಮತ್ತು ಅಮೃತಕ್ಕೂ ಏನು ಸಂಬಂಧ ಅಂದ್ರೆ: ಗರುಡ ಶಕ್ತಿಯ ಸಂಕೇತ, ಸ್ವರ್ಗದಲ್ಲಿದೆ ಅಂತ ನಂಬಲಾದ ಅಮೃತ ಸ್ನೇಹ,ಪ್ರೀತಿ, ಮಮತೆ, ವಾತ್ಸಲ್ಯಗಳ ಸಂಕೇತ. ಭೂಮಿಯಲ್ಲಿ- ಸಮಾಜದಲ್ಲಿ- ಅಮೃತದ ಕೊರತೆ ಕಂಡಾಗ, ಅದನ್ನ ನಾನು ತರ್ತೇನೆ ಅಂತ ತನ್ನೆಲ್ಲ ಶಕ್ತಿಯನ್ನ ಒಗ್ಗೂಡಿಸಿಕೊಂಡು ಸ್ವರ್ಗಕ್ಕೆ ಹಾರುವುದು ಗರುಡ (ಗರುಡ ಪುರಾಣದಲ್ಲಿ, ಸರ್ಪಗಳಿಂದ ತಾಯಿಯನ್ನ ಕಾಪಾಡಲು ಗರುಡ ಅಮೃತವನ್ನ ತರಲೆಂದು ಸ್ವರ್ಗಕ್ಕೆ ಹಾರುತ್ತಾನೆ). ಸಾಹಿತ್ಯ ಪ್ರಕಾರಗಳಲ್ಲಿ ಗರುಡ ಅಂದ್ರೆ ಕಾವ್ಯ ಅಂತಾರೆ ಬೇಂದ್ರೆಯವರು . ಯಾವ ಕಾಲದ ಗರುಡ ಪುರಾಣ, ಯಾವ ಕಾಲದ ಬೇಂದ್ರೆ; ಇಡೀ ಗರುಡ ಪುರಾಣವನ್ನ ಒಂದೇ ಒಂದು ಸಾಲಿನಲ್ಲಿ ಕಾವ್ಯಕ್ಕೆ ಹೋಲಿಸಿ ಬರೆದರಲ್ಲ ಎಂಥಾ 'ಶಬ್ದ ಗಾರುಡಿಗ'.

ಬೇಂದ್ರೆ ಮತ್ತು ಶ್ರೀಕೃಷ್ಣ ಅವರು ಬೆಳಗನ್ನ ಬೇರೆ ಬೇರೆ ರೀತಿ ಸೆರೆಹಿಡಿದಿದ್ದಾರೆ. ನಮಗೆಲ್ಲ ಇರೋದು ಒಂದೇ ಬೆಳಗು ಆದರೆ ಕಂಡುಕೊಂಡ ಸತ್ಯ ಮಾತ್ರ !! ??. ಸತ್ಯ ಅನ್ನೋದು ಎಲ್ಲರಿಗೂ ಗೊತ್ತಾಗುವಂತಹದ್ದಲ್ಲ, ಅದು ಎಲ್ಲರಿಗೂ ಗೊತ್ತಾಗಲೂಬಾರದು; ಯಾರು ಸತ್ಯಕ್ಕಾಗಿ ಹುಡುಕುತ್ತಾರೋ, ಅದಕ್ಕಾಗಿ ಆಳಕ್ಕಿಳಿಯುತ್ತಾರೋ ಅವರಿಗೆ ಮಾತ್ರ ದಕ್ಕುವಂತಹದ್ದದು! ಹಾಗಾಗಿ ಕವಿತೆಗಳು ಸುಲಭವಾಗಿ ಯಾರಿಗೂ ಅರ್ಥವಾಗೋಲ್ಲ, ಮಾರುಕಟ್ಟೆಯಲ್ಲಿ ಕವನ ಸಂಕಲನಗಳು ಮಾರಾಟವಾಗುವುದು ಕಡಿಮೆಯೇ - ಬೆಲೆ ಕಡಿಮೆಯಿದ್ದರೂ ಕೂಡ!

ಬೇಂದ್ರೆ ಅವರ 'ಬೆಳಗು'

ಮೂಡಲ ಮನೆಯ ಮುತ್ತಿನ ನೀರಿನ ಎರಕಾವ ಹೊಯ್ದ

ನುಣ್ಣನೆ ಎರಕಾವ ಹೊಯ್ದ

ಬಾಗಿಲ ತೆರೆದು ಬೆಳಕು ಹರಿದು

ಜಗವೆಲ್ಲ ತೊಯ್ದ

ಎಲೆಗಳ ಮೇಲೆ, ಹೂಗಳ ಒಳಗೆ ಅಮೃತದಾ ಬಿಂದು

ಕಂಡವು ಅಮೃತದಾ ಬಿಂದು

ಯಾರಿರಿಸಿಹರು ಮುಗಿಲಿನ ಮೇಲಿನ ಇಲ್ಲಿಗೆ ಇದ ತಂದು.


ಶ್ರೀಕೃಷ್ಣ ಅವರ 'ಬೆಳಗು'

ಇರುಳ ಬೆತ್ತಲೆ ತೆಕ್ಕೆ ಬಿಡಿಸಿಕೊಂಡೆದ್ದ

ಸೂರ್ಯ: ಜಿಬುರೆಗಣ್ಣೋರಸುತ್ತಾಕಳಿಸಿ

ಕೊಬ್ಬಿದಾದು , ಕುರಿ , ಕೋಳಿ ಸಿಗಿದು ಸೀಳಿ

ಕಂದು , ನೀಲಿ , ಬಿಳಿ , ಕೆಂಪು ಖಂಡಗಳ ತೂಗಿತ್ತು

ಬಣ್ಣ ಬಣ್ಣದ ಮೂಡಣದ ಮಾಂಸದಂಗಡಿ ತೆರೆದಾಗ

ನನ್ನೂರಿನಲ್ಲಿ ಬೆಳಗಾಯಿತು.


ಬೇಂದ್ರೆ ಅವರ ಅಮೃತದಾ ಬಿಂದು, ಶ್ರೀಕೃಷ್ಣ ಅವರ ಮಾಂಸದಂಗಡಿ ಕಂಡದ್ದು ಬೆಳಗಿನಲ್ಲಿ ಅನ್ನೋದು ಸತ್ಯ.

ನಿಮ್ಮ ಸತ್ಯ ನಿಮ್ಮೊಳಗಿದೆ ಅದೂ ಸತ್ಯವೇ.


(

ಶ್ರೀಕೃಷ್ಣ ಅವರ 'ಊಟಕ್ಕೆ ಕೂತಾಗ' ಈಗಾಗಲೇ ಒಮ್ಮೆ ಪೋಸ್ಟ್ ಮಾಡಿದ್ದೆ: http://pennupaper.blogspot.com/search?updated-min=2010-01-01T00%3A00%3A00-08%3A00&updated-max=2011-01-01T00%3A00%3A00-08%3A00&max-results=35 )