Feb 1, 2010

"ಸರಣಿ ಕೊಲೆ"


ರವೆಲ್ಲ ಬೋಳಾಗಿ ಮತ್ತೆ ಎರಡನೆ ಬಾರಿ ಚಿಗುರಿತ್ತು, ಭೂಮಿಯ ಬಿಸಿ ಕಳೆದ ವರ್ಷಕ್ಕಿಂತ ಸ್ವಲ್ಪ ಹೆಚ್ಚಾಗಿತ್ತು.

ಒಂದು ದಿನ ಅದೆಂತಹ ವಿಚಿತ್ರ, ಬೆಂಗಳೂರಿನ ರಿಂಗ್ ರೋಡಿನಲ್ಲಿ ಜನರ ಸದ್ದುಇಲ್ಲ, ಅಸಲಿಗೆ ಕಣ್ಣಿಗೆ ಕಾಣುವಷ್ಟು ದೂರದವರೆಗೆ ಎಡ-ಬಲಗಳಲ್ಲಿ ಒಂದೇಒಂದು ವೆಹಿಕಲ್ ಇಲ್ಲ ! ! !

ಅದೇ ರಸ್ತೆಯ ತಕ್ಕ ಮಟ್ಟಿನ ದೊಡ್ಡ ಮರದ ಕೆಳಗೆ ಭೇಟಿ ಮಾಡಬೇಕೆಂದು ಡಿಸಯ್ದ್ ಮಾಡಿದ್ರು ಅವರಿಬ್ಬರು ! ಒಂದು ವರ್ಷದ ಹಿಂದೆ!

ಅವನು ಬರ್ ಬರ್ರ ಅಂತ ಜೋರಾಗಿ ಬಂದ, ಯಾರು ಇಲ್ಲದ ರೋಡ್ ನೋಡಿ ಅವನ ಬೈಕಿನ ಸೌಂಡ್ ಗೆ ಆತಂಕವಾಯ್ತು. ಇವತ್ತು ಬೆಂಗಳೂರು ಬಂದ್ ಇರಬಹುದಾ? ಸೌಂಡ್ ತನ್ನ ಪಾಡಿಗೆ ತಾನು ಸುಮ್ಮನಾಯಿತು. ಇಲ್ಲ ಇಲ್ಲ ನಮ್ಮಿಬ್ಬರ ಭೇಟಿಗೆ ಇದು ಪೂರ್ವ ಸಿದ್ದತೆ ಇರಬಹುದು ಎಂದು ಒಳೊಳಗೆ ಕಳ್ಳ ನಗೆ ನಕ್ಕ.

ಬೈಕ್ ಇಳಿದು ಮರವನ್ನೊಮ್ಮೆ ಎದುರು ನಿಂತು ಪ್ರೀತಿಸಿದ, ಬೆನ್ನು ಅವಳ ಮನೆ ಕಡೆಗಿತ್ತು. ಸಂಜೆ ಸೂರ್ಯ ಮರವನ್ನ ಸೀಳಿಕೊಂಡು ಇವನ ಮುಖದ ಮೇಲೆ ಬೀಳುತ್ತಿದ್ದ. ಹಳೆಯ ಘಟನೆಗಳನ್ನ ನೆನೆಯುತ್ತಿದ್ದ, ನಗುತ್ತಿದ್ದ, ಯೋಚಿಸುತ್ತಿದ್ದ ಮತ್ತು ಅವಳಿಗಾಗಿ ಕಾಯುತ್ತಿದ್ದ . ಮರ ಅವನ ಪ್ರೇಮದ ಸಾಕ್ಷಿಯಾಗಿತ್ತು. ಮರದ ನೆರಳಿನಲ್ಲಿ ನಿಂತು ಅವಳ ನೋಡಲು ಶಬರಿಯಂತೆ ಕಾಯುತ್ತಿದ್ದ ವರ್ಷದ ಹಿಂದೆ. ಅದೇನಾಯಿತೋ ಏನೋ ಅವಳಿಗೆ ಇವನು ಇಷ್ಟ ಆಗಲಿಲ್ಲ, ತಿರಸ್ಕಾರಕ್ಕೆ ಕಾರಣವೂ ಇಲ್ಲ.

ಯೋಚನೆಯಲ್ಲಿರುವಾಗಲೇ ಹಕ್ಕಿಯೊಂದು ಬಂದು ಇವನಿಗೆ ಹತ್ತಿರವಿರುವ ರೆಂಬೆಯ ತುದಿಯಲ್ಲಿ ಕೂತಿತು. ತನ್ನವಳು ಬಂದಳೇ ಎಂದು ತಿರುಗಿ ನೋಡಿದ ಯಾರು ಇಲ್ಲ, ಆಸೆಗೆ ನಿರಾಸೆಯಾಯಿತು. ಮರದೆಡೆ ನೋಡಿ ಹಕ್ಕಿಯನ್ನೊಮ್ಮೆ ನೋಡಿದ.

ಪರ್ ಫ್ಯುಂ ಪರಿಮಳ ಮೆಲ್ಲಗೆ ಬರಲಾರಂಭಿಸಿತು ತಿರುಗಿ ನೋಡಿದ ಅವಳ ನಡಿಗೆ ರಸ್ತೆ ದಾಟಿ ಇವನತ್ತಲೇ ಬರುತ್ತಿತ್ತು, ಜಿಬ್ರ ಕ್ರಾಸ್ ದೂರದಲ್ಲಿ ಮಲಗಿತ್ತು.
ಹಕ್ಕಿ ಹಾರಿಹೋಯಿತು.

ಅವಳ ಕಂಡೊಡನೆ ಬೈಕು ನಿಂತುಕೊಂಡಲ್ಲಿಯೇ ನೂರು ಕಿಲೋ ಮೀಟರ್ ಸ್ಪೀಡಿನಲ್ಲಿ ತೇಲಾಡಿತು.

ಅವಳು ತಾನಾಗಿ ಬಂದಿಲ್ಲ, ದಿನಕ್ಕಾಗಿ ಪರಿತಪಿಸಿಯೂ ಇಲ್ಲ, ತಾವಿಬ್ಬರು ಯಾವ ಕಾರಣಕ್ಕಾಗಿ ಭೇಟಿಯಾಗಬೇಕೆಂದು ನೆನಪಿರಲಿಲ್ಲ, ಪ್ರೀತಿಗೆ ಷರತ್ತುಗಳನ್ನ ಹಾಕಿದ ಹುಡುಗಿಗೆ.

ಫೋನು ಮಾಡಿ ಎಲ್ಲವನ್ನ ನೆನಪು ಮಾಡಿಕೊಟ್ಟು ಬರಹೇಳಿದ್ದ, ದಿನಕ್ಕಾಗಿ ತಪಸ್ಸು ಮಾಡಿದ್ದ ಆಸೆಯ ಕಣ್ಣುಗಳ ಕನಸಿನ ಹುಡುಗ. ಇವನಲ್ಲಿ ಅನುಮಾನವಿತ್ತು, ಆತಂಕವಿತ್ತು ಹೆಚ್ಚಾಗಿ ತನ್ನ ಪ್ರೀತಿಯ ಬಗ್ಗೆ ನಂಬಿಕೆಯಿತ್ತು.

ಬಂದವಳೇ ಅದೆನಂದ್ಲೋ ಏನೋ ಯಾರಿಗೂ ತಿಳಿದಿಲ್ಲ, ಅಸಲಿಗೆ ಅಲ್ಲಿ ಯಾರು ಇರಲಿಲ್ಲ.

ಅವಳು ಬಂದಿದ್ದಳು ಎನ್ನುವ ಗುರುತು ಸಿಗದ ಹಾಗೆ ರೋಡ್ ಕ್ರಾಸ್ ಮಾಡಿ ಹೊರಟು ಹೋದಳು.

ಹಾರಿ ಹೋದ ಹಕ್ಕಿ ಮತ್ತೆ ಬಂದು ಕೂತಿತು, ಇವನು ಅದನ್ನ ನೋಡಲಿಲ್ಲ.
ಕಲ್ಪನೆಯಲ್ಲಿ ಬಂದಂತೆ ಬಂದು ಹೋದ ಅವಳು ಎದೆಗೆ ಸಾವಿರ ಬಾರಿ ಇರಿದು ಹೋಗಿದ್ದಳು.

ಸೂರ್ಯ ಪೂರ್ತಿಯಾಗಿ ಸರಿದಿರಲಿಲ್ಲ ಆದರೆ ಇವನು ಹಾಗೆಂದುಕೊಂಡ, ಬೈಕ್ ಸ್ಟಾರ್ಟ್ ಆಗ್ಲಿಲ್ಲ ಇನ್ನೊಮ್ಮೆ ಕಿಕ್ ಮಾಡಬೇಕು ಅಂತ ಅನ್ನಿಸದೆ ಇವನ ನೆರಳು ಬೈಕ್ ತಳ್ಳಿಕೊಂಡು ಸತ್ತಂತೆ ಚಲಿಸಿತು, ಹಕ್ಕಿಗೆ ಅಳುಬಂದಿತು.

ಅನುಮಾನ ಬಂದಂತೆ ಹಕ್ಕಿ ಅವನು ನಿಂತ ಜಾಗವನ್ನೊಮ್ಮೆ ನೋಡಿತು, ಹೌದು ಅಲ್ಲೇನೋ ಬಿದ್ದಿದೆ ಕರೆಯೋಣವೆಂದು ಇವನತ್ತ ನೋಡಿತು, ಯಾರು ಕಾಣಲಿಲ್ಲ.

ಇಡೀ ರಸ್ತೆಯ ಶಾಂತಿಯನ್ನು ಕೊಲೆಮಾಡುತ ದಡಗ್ ಬದಗ್ ಎನ್ನುತ ಒಂದೇ ಒಂದು ಪಾರ್ಟು ಸರಿಯಿಲ್ಲದ, ಆಯುಷ್ಯ ಮುಗಿದು ಹೋದ ಕಾರ್ಪೋರಶನ್ ಲಾರಿಯೊಂದು ಮರದ ಹತ್ತಿರ ಬಂದು ನಿಂತಿತು.

ಡ್ರೈವರ್ ' ಇಲ್ಲೇನೋ ಸತ್ತು ಬಿದ್ದಿದೆ ಯೆತ್ತಾಕ್ಕೊಲ್ರಲೇ' ಅಂದ

ಅನಾಥ ಶವವೊಂದು ಕಾರ್ಪೋರಶನ್ ಲಾರಿ ಸೇರಿತು.

ಅದೆಷ್ಟೋ ಸಿಗರೇಟಿನ ತುಂಡುಗಳು, ರಮ್ಮು, ವ್ಹಿಸ್ಕಿ, ಬೀರಿನ ಬಾಟಲಿಗಳು ಮಾತಾಡುತ್ತಿದ್ದವು ' ನಾವು ಇಷ್ಟು ದಿನ ಸೇರುತ್ತಿದ್ದದು ಕಡಲ ಪ್ರೀತಿಯ ಹುಡುಗನ ವಿರಹದೆದೆಯಲ್ಲಿ'

ಕುತೂಹಲದಿಂದ ನೋಡುತ್ತಿದ್ದ ಹಕ್ಕಿಗೆ ಮಾತು ಕೇಳಿತು ಅದಕ್ಕೆ ಮನವರಿಕೆಯಾಯಿತು, ಅವಳ ಮಾತಿನಿಂದ ಇವನ ಮನಸ್ಸು ಕೊಲೆಯಾಗಿತ್ತು.

ಹಕ್ಕಿ ಬಿಕ್ಕಳಿಲಾರಂಭಿಸಿತ್ತು. ಕಾರ್ಪೋರಶನ್ನಿನ ಲಾರಿ ಕೊನೆಯ ಪಯಣಕೆ ಸಾಗಿತು ! !
ಹಕ್ಕಿ ಇನ್ನೂ ಅಳುತ್ತಿತ್ತು ಹಾರಿ ಹೋಗಲಿಲ್ಲ.

ಸ್ವಲ್ಪ ಹೊತ್ತಿನಲ್ಲಿ ಹುಡುಗ- ಹುಡುಗಿಯರಿಂದ ತುಂಬಿದ ಕಾಲೇಜು ಬಸ್ಸೊಂದು ಬರ್ರನೆ ಮರದ ಮುಂದೆ ತೂರಿ ಹೋಯಿತು.


ಹಕ್ಕಿ ಎದೆಯೊಡೆದು ಪ್ರಾಣಪಕ್ಷಿ ಹಾರಿ ಹೋಯಿತು. ಇವನ ಮನಸು ಬಿದ್ದಿದ್ದ ಜಾಗದಲ್ಲಿ ಹಕ್ಕಿ ಉರುಳಿ ಬಿತ್ತು.

ಬಸ್ಸಿನಲ್ಲಿ ಅದೆಷ್ಟು ಕೊಲೆಯಾದ ಮನಸುಗಳನ್ನ ನೋಡಿತೋ ಪಾಪ.

ಮರುದಿನ ಹತ್ತು ಗಂಟೆಗೆ ಎರೆಡು ನಿಮಿಷ ಹತ್ತು ಸೆಕೆಂಡು ಬಾಕಿ ಇತ್ತು, ಬೀದಿ ದೀಪ ಇನ್ನೂ ಉರಿಯುತ್ತಿತ್ತು !

ಒಂದು ಹುಡುಗ ಅದೇ ಮರಕ್ಕೆ ವರಗಿ ನಿಲ್ಲಲು ಹತ್ತಿರ ಹೋದ

ವೆಹಿಕಲ್ಲುಗಳ ಹೋಗೆಯಿಂದ, ವಿರಹಿಗಳ ಬಿಸಿಯುಸಿರಿನಿಂದ ಏರುವ ಭೂಮಿಯ ಬಿಸಿಯಿಂದ ಮರವೆಲ್ಲ ಕಪ್ಪಾಗಿತ್ತು.

ಹುಡುಗ ವರಗಿಕೊಳ್ಳದೆ ಅದರ ನೆರಳಲ್ಲಿ ಮರಕ್ಕೆ ಬೆನ್ನು ತೋರಿಸಿ ನಿಂತುಕೊಂಡ, ಬಾಯಿ ತೆರೆದ ಮ್ಯಾನ್ ಹೋಲ್ ನ ವಾಸನೆ ಸಹಿಸಿಕೊಂಡು. ಕಣ್ಣುಗಳಲ್ಲಿ ಸಾವಿರ ಕನಸುಗಳಿದ್ದವು, ತುಟಿಯ ಮೇಲೆ ಆಸೆ ಮಿತಿಯಿಲ್ಲದೆ ಹರಿದಾಡುತ್ತಿತ್ತು.

ಹೊಸ ಹಕ್ಕಿ ಬಂದು ಮರದಲಿ ಕೂತಿತು.

ಮರ ಮತ್ತೊಂದು ಪ್ರೇಮಕಥೆಗೆ, ಅಮಾಯಕ ಮನಸಿನ ಕೊಲೆಗೆ ಪ್ರತ್ಯಕ್ಷ ಸಾಕ್ಷಿಯಾಗಲು ತಯಾರಾಗಿತ್ತು.

=====
=====

2 comments:

  1. ಕವಿ ಮಹಾಶಯರೇ ನಮಸ್ಕಾರಗಳು .... ತುಂಬಾ ಚೆನ್ನಾಗಿ ಕೊಲೆಯನ್ನ ಮಾಡಿದಿರಾ ..

    ReplyDelete
  2. Ninna Sarani Kole Chenagide..........
    Thumba ishta agiddu.....
    Hakkiya Kalpanika maathu,Bhavane...........

    ReplyDelete